ಕಾರ್ಕಳ:19 ವರ್ಷದಿಂದ ನಿಮ್ಮ ಬೆಂಬಲಿಗರ ಗೂಂಡಾ ವರ್ತನೆ, ದೌರ್ಜನ್ಯಕ್ಕೆ ಕಾರ್ಕಳದ ಜನತೆ ಈ ಭಾರಿ ನಿಮಗೆ ತಕ್ಕ ಶಾಸ್ತಿ ಮಾಡಲಿದ್ದಾರೆ-ಯೋಗೀಶ್ ಆಚಾರ್ಯ ಇನ್ನ
ಸಾಮಾನ್ಯ ಕಾರ್ಯಕರ್ತರಿಗೆ ನೀವು ನೀಡಿದ ಕಿರುಕುಳ,ದಬ್ಬಾಳಿಕೆ, ಸುಳ್ಳುಕೇಸುಗಳು,ಇವುಗಳೇ ನಿಮಗೆ ಈಗ ಜನಾಕ್ರೋಶವಾಗಿ ತಿರುಗಿ ನಿಂತಿದೆ.ಗಾಂದಿ ತತ್ವವನ್ನು ಪಾಲನೆ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಗಾಂಧಿಯನ್ನು ಅವಹೇಳನ ಮಾಡುವ ಬಿಜೆಪಿ ಪಕ್ಷದಿಂದ ಸಜ್ಜನಿಕೆಯ ಪಾಠದ ಅಗತ್ಯವಿಲ್ಲ.
ಸಜ್ಜನ ರಾಜಕಾರಣಿ ಗೋಪಾಲ ಭಂಡಾರಿಯವರ ಮೇಲೆ ಸುಳ್ಳು ಆರೋಪ ಹಾಕಿ ಅವರ ಕಣ್ಣಲ್ಲಿ ಕಣ್ಣೀರು ಹಾಕಿಸಿ, ಅವರ ಸಮುದಾಯದ ಕುಲ ಕಸುಬನ್ನೂ ಅವಹೇಳನ ಮಾಡಿದ ನೀವು ಗೋಪಾಲ ಭಂಡಾರಿಯವರನ್ನು ಅಪಪ್ರಚಾರದ ಅಸ್ತ್ರಗಳ ಮೂಲಕ ನಿರಂತರವಾಗಿ ಕಾಡಿದ ನೀವು ಕಾಂಗ್ರೆಸ್ ಪಕ್ಷಕ್ಕೆ ಸಜ್ಜನಿಕೆಯ ಪಾಠ ಮಾಡಲು ಯಾವ ನೈತಿಕತೆಯನ್ನೂ ಹೊಂದಿಲ್ಲ.
ನಮ್ಮ ಅಭ್ಯರ್ಥಿ ಉದಯಣ್ಣ ಸಾತ್ವಿಕ ಸ್ವಭಾವದ ಸರಳ ಸಜ್ಜನ ವ್ಯಕ್ತಿ… ಅದೆಷ್ಟೋ ಬಡವರ ಮನೆಗೆ ಬೆಳಕಾದವರು, ಅದೆಷ್ಟೋ ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ ಕರುಣಿಸಿದವರು.ಧಾರ್ಮಿಕ ಕ್ಷೇತ್ರಗಳಿಗೆ ಕೊಡುಗೆ ನೀಡಿದವರು.ಅಂತಹ ಸಜ್ಜನನಿಕೆಯ ಯುನಿವರ್ಸಿಟಿ ಉದಯ ಶೆಟ್ಟಿ ಮುನಿಯಾಲು.. ಅಂತಹ ಸಜ್ಜನನಿಗೆ ನಿಮ್ಮಿಂದ ಸಜ್ಜನಿಕೆಯ ಟ್ಯೂಷನ್ ಪಾಠದ ಅಗತ್ಯವಿಲ್ಲ..
ಕಾರ್ಕಳದ ಜನತೆ 19 ವರ್ಷದಿಂದ ನಿಮ್ಮ ಬೆಂಬಲಿಗರ ಗೂಂಡಾ ವರ್ತನೆ, ದೌರ್ಜನ್ಯವನ್ನು ಸೂಕ್ಷ್ಮವಾಗಿ ಗಮನಿಸಿದ್ದು ಈ ಬಾರಿ ನಿಮಗೆ ತಕ್ಕ ಶಾಸ್ತಿ ಮಾಡಲಿದ್ದಾರೆ ಎದು ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಆಚಾರ್ಯ ಇನ್ನ ತಿಳಿಸಿದ್ದಾರೆ.