ಹೆಬ್ರಿ ಅರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರ ಕೊರತೆ:ಸರ್ಕಾರದ ಗಮನಕ್ಕೆ ತಂದು ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ
ಹೆಬ್ರಿ:ಹೆಬ್ರಿ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರು ಇಲ್ಲ ಹಾಗೂ ಸಮರ್ಪಕವಾಗಿ ಔಷದ ದೊರಕುತ್ತಿಲ್ಲ ಎಂಬ ಜನರ ದೂರಿನ ಮೇರೆಗೆ ಕಾರ್ಕಳ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರು ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ಶೀಘ್ರ ಸರಕಾರದ ಗಮನಕ್ಕೆ ತಂದು ಬಗೆಹರಿಸುವ ಭರವಸೆ ನೀಡಿದರು.
ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸಂತೋಷ್ ಕುಮಾರ್ ಅವರಲ್ಲಿ ಆಸ್ಪತ್ರೆಗೆ ಬೇಕಾಗುವ ಅಗತ್ಯತೆ ಬಗ್ಗೆ ಮಾಹಿತಿ ಪಡೆದರು.ಖಾಯಂ ವೈದ್ಯರು ಹಾಗೂ ಬೇಕಾಗುವ ಅಗತ್ಯ ಸೌಲಭ್ಯದ ಬಗ್ಗೆ ವಿಚಾರಿಸಿದರು.ಹೆಬ್ರಿ ಸಮುದಾಯ ಅರೋಗ್ಯ ಕೇಂದ್ರದ ಜಾಗಕ್ಕೆ ಇನ್ನೂ ಕೂಡ ಸರಿಯಾದ ದಾಖಲೆ ಪತ್ರಗಳು ಆಗಲಿಲ್ಲ.ಸರಕಾರದ ದಾಖಲೆ ಪತ್ರಗಳೇ ಸರಿಯಾಗದಿದ್ದರೆ ಜನಸಾಮಾನ್ಯರ ಪಾಡೇನು?ಆಸ್ಪತ್ರೆಯ ಬೃಹತ್ ಕಟ್ಟಡ ಮಾತ್ರ ಇದೆ.ಆದರೆ ಜನಸಾಮಾನ್ಯರಿಗೆ ಬೇಕಾದ ಯಾವುದೇ ಚಿಕಿತ್ಸೆ ಸರಿಯಾಗಿ ಸಿಗುತ್ತಿಲ್ಲ ಎಂದು ಕಳೆದ ಹಲವಾರು ವರುಷಗಳಿಂದ ದೂರು ಬರುತ್ತಿದೆ.ಅರೋಗ್ಯ ಸೇವೆಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ.ಹಿಂದಿನ ಸರ್ಕಾರ ಮಾಡಿರುವ ಅಭಿವೃದ್ಧಿ ಇದೇನಾ ಎಂದು ಪ್ರಶ್ನಿಸಿದರು.
ಹೆಬ್ರಿ ತಾಲೂಕು ಕೇಂದ್ರವಾದುದರಿಂದ ಕೂಡಲೇ ಹೆಬ್ರಿ ತಾಲೂಕು ಆಸ್ಪತ್ರೆಯಾಗಬೇಕು.ಈ ಬಗ್ಗೆ ಶೀಘ್ರದಲ್ಲಿ ಮುಖ್ಯಮಂತ್ರಿಯವರಲ್ಲಿ ತಿಳಿಸಿ ಹೆಬ್ರಿ ಶೀಘ್ರ ತಾಲೂಕು ಆಸ್ಪತ್ರೆಯನ್ನು ಮಂಜೂರು ಮಾಡಿಸುವಲ್ಲಿ ಪ್ರಯತ್ನಿಸುವೆ ಎಂದು ಮುನಿಯಾಲು ಉದಯ್ ಶೆಟ್ಟಿ ಹೇಳಿದರು.
ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಬಾಯರಿ,ಪಂಚಾಯತ್ ಸದಸ್ಯ ಜನಾರ್ಧನ್ ,ಕರುಣಾಕರ,ಪ್ರಚಾರ ಸಮಿತಿ ಅಧ್ಯಕ್ಷ ನವೀನ ಕೆ. ಅಡ್ಯಂತಾಯ ,ಯುವ ಅಧ್ಯಕ್ಷ ದಿನೇಶ್ ಶೆಟ್ಟಿ,ಸಾಮಾಜಿಕ ಕಾರ್ಯಕರ್ತ ಹರೀಶ್ ಶೆಟ್ಟಿ, ನಿತಿನ್ ಎಸ್.ಪಿ. ಗೋಪಿನಾಥ್ ಭಟ್,ಸಂತೋಷ್, ವೆಂಕಟೇಶ್ ಉಪಸ್ಥಿತರಿದ್ದರು.