ಆಂದ್ರ ಪ್ರದೇಶದ ವಿಜಯವಾಡದಲ್ಲಿ ಆಯೋಜಿಸಿದ 68ನೇ ರಾಷ್ಟ್ರೀಯ ಶಾಲಾ ಬಾಲಕಿಯರ ವಾಲಿಬಾಲ್ ಕ್ರೀಡಾಕೂಟದಲ್ಲಿ ರಾಷ್ಟ್ರಕ್ಕೆ ದ್ವಿತೀಯ ಸ್ಥಾನವನ್ನು ಪಡೆದು ಬೆಳ್ಳಿಯ ಪದಕದ ಗೌರವಕ್ಕೆ ಪಾತ್ರವಾದ ಕರ್ನಾಟಕದ ರಾಜ್ಯ ಬಾಲಕಿಯರ ತಂಡವನ್ನು ಪ್ರತಿನಿಧಿಸಿ ಕಾರ್ಕಳ ಎಸ್. ಎನ್.ವಿ. ಕಾಲೇಜಿನ ವಿದ್ಯಾರ್ಥಿ ಸಾಂತ್ರಬೆಟ್ಟು ಕುಮಾರಿ ದ್ರುವಿ ಇವರಿಗೆ ಜೋಡುರಸ್ತೆಯ ದುರ್ಗಾ ಫ್ರೆಂಡ್ಸ್ ವಾಲಿಬಾಲ್ ಕ್ರೀಡಾಂಗಣದಲ್ಲಿ ಭವ್ಯವಾದ ಸ್ವಾಗತವನ್ನು ನೀಡಲಾಯಿತು.
ಕ್ರೀಡಾ ಪ್ರೋತ್ಸಾಹಕ ಶುಭದರಾವ್ ಅಭಿನಂದನಾ ಮಾತುಗಳನ್ನಾಡಿ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಿದರೆ ಅವರಿಗೆ ಸಾಧನೆ ಮಾಡುವಲ್ಲಿ ಪ್ರೇರಣೆಯಗುತ್ತದೆ, ದ್ರುವಿ ಶಾಲಾ ವಿಭಾಗದ ಪಂದ್ಯದಲ್ಲಿ ರಾಷ್ಟ್ರದ ಮಟ್ಟದ ಸಾಧನೆ ಮಾಡಿದ ಕಾರ್ಕಳದ ಪ್ರಥಮ ವಿದ್ಯಾರ್ಥಿನಿ ಆಗಿದ್ದಾರೆ.ಅವರ ಸಾಧನೆ ಶ್ಲಾಘನೀಯ ನಾವೆಲ್ಲರೂ ಹೆಮ್ಮೆ ಪಡುತ್ತೇವೆ ಎಂದರು.
ವಾಲಿಬಾಲ್ ತರಬೇತುದಾರದ ಸಂತೋಷ್ ಡಿ’ಸೋಜ, ಜೀವನ್ ಡಿ’ ಸಿಲ್ವಾ, ಜಯರಾಜ್ ಪೂಜಾರಿ, ವೆಂಕಟೇಶ್ ಪ್ರಭು, ಕ್ರೀಡಾ ಪ್ರೋತ್ಸಾಹಕ ಸಂದೇಶ್ ವರ್ಮ , ಪ್ರತಿಮಾ ಡಿ’ಸೋಜಾ, ದ್ರುವಿ ಪೋಷಕ ದಂಪತಿಗಳಾದ ರಾಜೇಂದ್ರ ಪ್ರಸಾದ್ ಮತ್ತು ಪ್ರಿಯಾ ಹಾಗೂ ದುರ್ಗಾ ಪ್ರೆಂಡ್ಸ್ ತಂಡದ ಆಟಗಾರು ಉಪಸ್ಥಿತರಿದ್ದರು.