Saturday, January 31, 2026
Google search engine
Homeಕಾರ್ಕಳಸಂಸತ್ತು ಉದ್ಘಾಟನೆಗೆ ಮುರ್ಮು ಗೈರು ಯಾಕೆಂದು ಬಿಜೆಪಿ ಹೇಳಲಿ: ಲಾಡ್

ಸಂಸತ್ತು ಉದ್ಘಾಟನೆಗೆ ಮುರ್ಮು ಗೈರು ಯಾಕೆಂದು ಬಿಜೆಪಿ ಹೇಳಲಿ: ಲಾಡ್

 

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಪ್ರಶ್ನಿಸುತ್ತಿರುವ ಬಿಜೆಪಿ ನಡೆಗೆ ಪ್ರತಿಯಾಗಿ ಹೊಸ ವಿಷಯವೊಂದನ್ನು ಎತ್ತಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್, ‘ನೂತನ ಸಂಸತ್ತ್ ಭವನ ಉದ್ಘಾಟನೆ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕರೆದೊಯ್ಯದಿರಲು ಕಾರಣ ಏನು? ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಆಯ್ಕೆ ವೇಳೆ ಮುಸ್ಲಿಂ ಎಂಬ ಆಯ್ಕೆ ಬರಲಿಲ್ಲವೇ?’ ಎಂದು ಪ್ರಶ್ನಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್ತಿಗೆ ದ್ರೌಪದಿ ಮುರ್ಮು ಅವರನ್ನು ಯಾಕೆ ಕರೆದುಕೊಂಡು ಹೋಗಲಿಲ್ಲ? ಅದರ ಉದ್ಘಾಟನೆ ವೇಳೆ ಶಿಷ್ಟಾಚಾರ ಪ್ರಕಾರ ಯಾರು ಮುಂದಿರಬೇಕಿತ್ತು? ಆಗ ಶಿಷ್ಟಾಚಾರ ಪಾಲನೆ ಆಗಿದೆಯೇ? ಮುರ್ಮು ಅವರನ್ನು ಪರಿಶಿಷ್ಟ ಪಂಗಡದವರು ಅಥವಾ ವಿಧವೆ ಎಂಬ ಕಾರಣಕ್ಕೆ ಕರೆದೊಯ್ಯಲಿಲ್ಲವೇ? ಎಂದು ಪ್ರಶ್ನಿಸಿದರು.

ಬಿಜೆಪಿಯವರು ಹಿಂದೂಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಇವರು ಎಷ್ಟು ಗುಡಿಗಳನ್ನು ಕಟ್ಟಿಸಿದ್ದಾರೆ? 6.66 ಲಕ್ಷ ಗುಡಿಗಳು ನಮ್ಮ ಕಾಲದಲ್ಲಿ ಆಗಿವೆ. ಬಿಜೆಪಿಯವರು ರಾಮ ಮಂದಿರವನ್ನು ಜನರ ದುಡ್ಡಿನಿಂದ ಕಟ್ಟಿದ್ದು ಎಂದರು.

ಅಷ್ಟಕ್ಕೂ ಬಾನು ಮುಷ್ತಾಕ್ ಆಯ್ಕೆ ಬಗ್ಗೆ ಜೆಡಿಎಸ್, ಬಿಜೆಪಿಯಲ್ಲೇ ಬಿನ್ನಾಭಿಪ್ರಾಯ ಇದೆ. ಈ ವಿಷಯದಲ್ಲಿ ಯದುವೀರ್ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments