
ಪರಸ್ಪರ ಸೇವಾ ಟ್ರಸ್ಟ್ (ರಿ)ಈದು -ನಾರಾವಿ ವತಿಯಿಂದ ಹಿಂದೂ ಸಂಘಟನೆಯ ಕಾರ್ಯಕರ್ತ ಸಂತೋಷ್ ಆಚಾರ್ಯರವರಿಗೆ ಧನ ಸಹಾಯ ಮಾಡಲಾಯಿತು.
ಇವರು ಒಂದು ತಿಂಗಳ ಹಿಂದೆ ವೆಡ್ಡಿಂಗ್ ಕೆಲಸ ಮಾಡುತ್ತಿದ್ದಾಗ ಮನೆಯ ಮಾಡಿನಿಂದ ಕೆಳಗೆ ಬಿದ್ದು ಸೊಂಟ ಮತ್ತು ಕಾಲುಗಳಿಗೆ ಗಂಭೀರ ಗಾಯವಾಗಿ ತಿಂಗಳ ಕಾಲ ಚಿಕಿತ್ಸೆ ಪಡೆದು ಕೆಲವು ದಿನಗಳ ಹಿಂದೆ ಆಸ್ಪತ್ರೆಯಿಂದ ಬಂದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಸಂತೋಷ್ ರವರು ಕಡು ಬಡತನದಿಂದ ವಯಸ್ಸಾದ ತಂದೆ ತಾಯಿ ತನ್ನ ಎರಡು ವರ್ಷದ ಮಗು ಮತ್ತು ತನ್ನ ಹೆಂಡತಿಯೊಂದಿಗೆ ಜೀವನ ಸಾಗಿಸುತ್ತಿದ್ದು ಮನೆಗೆ ಆಧಾರ ಸ್ತಂಭವಾಗಿದ್ದ ಸಂತೋಷ್ ಈ ಆಕಸ್ಮಿಕ ಅವಘಡದಿಂದ ಮನೆಯಲ್ಲಿ ಕೂರುವ ಹಾಗೆ ಆಗಿದೆ. ಈ ಕಷ್ಟದ ಸಮಯವನ್ನು ತಿಳಿದ ಪರಸ್ಪರ ಸೇವಾ ಟ್ರಸ್ಟ್ ನ ಕಾರ್ಯಕರ್ತರು ಊರಿನವರ ಸಹಕಾರದಿಂದ ಒಂದು ಲಕ್ಷದ ಸಹಾಯಧನವನ್ನು ನೀಡಿದ್ದಾರೆ.
ಜಾಹೀರಾತು







