Friday, June 12, 2026
Google search engine
Homeಕಾರ್ಕಳಕಾರ್ಕಳ: ಮಗ ಮೃತಪಟ್ಟ ಬೇಸರ; ವಿಪರೀತ ಕುಡಿತಕ್ಕೊಳಗಾಗಿ ವ್ಯಕ್ತಿ ಆತ್ಮಹತ್ಯೆ

ಕಾರ್ಕಳ: ಮಗ ಮೃತಪಟ್ಟ ಬೇಸರ; ವಿಪರೀತ ಕುಡಿತಕ್ಕೊಳಗಾಗಿ ವ್ಯಕ್ತಿ ಆತ್ಮಹತ್ಯೆ

ಮಗ ಮೃತಪಟ್ಟ ಬೇಸರದಿಂದಾಗಿ ಮದ್ಯಪಾನದ ಚಟಕ್ಕೆ ಸಿಲುಕಿ, ಜೀವನದಲ್ಲಿ ಜಿಗುಪ್ಸೆಗೊಂಡು ವಿಶ್ವನಾಥ ಎಂಬವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದ ತೆಳ್ಳಾರು ಹೊಸಮನೆಯಲ್ಲಿ ನಡೆದಿದೆ.

ಮೃತ ವಿಶ್ವನಾಥ್ ಅವರು ಜೂ. 10 ರಂದು ಮದ್ಯಪಾನ ಮಾಡಿ ಬಂದು ಮಲಗಿದ್ದು, ಜೂ.೧೧ ರಂದು ಮೃತರ ಹೆಂಡತಿ ಎಂದಿನಂತೆ ಕೆಲಸಕ್ಕೆ ಹೋಗಿ ಮರಳುವ ವೇಳೆ ವಿಶ್ವನಾಥರವರು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments