Thursday, July 2, 2026
Google search engine
Homeಹೆಬ್ರಿಪಡುಕುಡೂರು ಶಾಲೆಯ ಮಕ್ಕಳಿಗೆ ಮುಳ್ಳುಗುಡ್ಡೆ ಕೊರಗಜ್ಜ ಕ್ಷೇತ್ರದಿಂದ ಬ್ಯಾಗ್‌ ಮತ್ತು ಲೇಖನ ಸಾಮಾಗ್ರಿ ಕೊಡುಗೆ

ಪಡುಕುಡೂರು ಶಾಲೆಯ ಮಕ್ಕಳಿಗೆ ಮುಳ್ಳುಗುಡ್ಡೆ ಕೊರಗಜ್ಜ ಕ್ಷೇತ್ರದಿಂದ ಬ್ಯಾಗ್‌ ಮತ್ತು ಲೇಖನ ಸಾಮಾಗ್ರಿ ಕೊಡುಗೆ

ಶಿವಪುರ ಮುಳ್ಳುಗುಡ್ಡೆ ಕೊರಗಜ್ಜ ಕ್ಷೇತ್ರದ ತನಿಯಜ್ಜ ಮತ್ತು ಮಂತ್ರದೇವತೆ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬ್ಯಾಗ್‌ ಮತ್ತು ನರ್ಸರಿಯಿಂದ ೮ನೇ ತರಗತಿಯ ವರೆಗಿನ ಮಕ್ಕಳಿಗೆ ಲೇಖನ ಸಾಮಾಗ್ರಿ ಕೊಡುಗೆಯನ್ನು ಬುಧವಾರ ನೀಡಲಾಯಿತು.

ಮುಳ್ಳುಗುಡ್ಡೆ ಕೊರಗಜ್ಜ ಕ್ಷೇತ್ರದ ಶಂಕರ ಶೆಟ್ಟಿ ಶಿವಪುರ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಶೆಟ್ಟಿ, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಭಾರವಿ ಶೆಟ್ಟಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಜಯಲೀಲಾ, ಮುಖ್ಯ ಶಿಕ್ಷಕ ಹರೀಶ ಪೂಜಾರಿ ಎಸ್‌, ವಿವಿಧ ಪ್ರಮುಖರಾದ ಶ್ರೀನಿವಾಸ ಆಚಾರ್ಯ, ಜ್ಯೋತಿಪ್ರಸಾದ್‌ ಶೆಟ್ಟಿ, ಅಂಗನವಾಡಿ ಶಿಕ್ಷಕಿ ಸವಿತಾ ಶೆಟ್ಟಿ, ಶಾಲೆಯ ಶಿಕ್ಷಕಿಯರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments