ಕಾರ್ಕಳ: ದೇಶದ ರಕ್ಷಣೆಯಲ್ಲಿ ಪ್ರತಿದಿನವೂ ನಿಸ್ವಾರ್ಥವಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ರೆಡಿಯೋ ನಿಟ್ಟೆ ತಂಡದ ವತಿಯಿಂದ ‘ರಕ್ಷಾ ಬಂಧನ್ ಫಾರ್ ಅವರ್ ರಕ್ಷಕಾಸ್’ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಅಭಿಯಾನದ ಅಂಗವಾಗಿ ದೇಶದ ಧೈರ್ಯಶಾಲಿ NDRF ಸಿಬ್ಬಂದಿಗಳಿಗೆ ರಾಖಿ, ಕೃತಜ್ಞತಾ ಪತ್ರಗಳು ಹಾಗೂ ಶುಭಾಶಯ ಸಂದೇಶಗಳನ್ನು ಅಂಚೆ ಮೂಲಕ ಕಳುಹಿಸಲಾಯಿತು.


























