‘ಬೈಲೂರು-ಪಳ್ಳಿ ಸರಕಾರಿ ಬಸ್ ಕಾಂಗ್ರೆಸ್ ಸರಕಾರದ ಕೊಡುಗೆ’ ರಾಜ್ಯ ಸರಕಾರಕ್ಕೆ ಧನ್ಯವಾದ ಸಲ್ಲಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್

0

‘ಬೈಲೂರು-ಪಳ್ಳಿ ಸರಕಾರಿ ಬಸ್ ಕಾಂಗ್ರೆಸ್ ಸರಕಾರದ ಕೊಡುಗೆ’
ರಾಜ್ಯ ಸರಕಾರಕ್ಕೆ ಧನ್ಯವಾದ ಸಲ್ಲಿಸಿದ ಶುಭದ ರಾವ್

ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ಕಾರ್ಕಳದ ಶಾಸಕ ವಿ.ಸುನೀಲ್ ಕುಮಾರ್ ರಾಜ್ಯ ಸರಕಾರದಲ್ಲಿ ಪ್ರಮುಖ ಖಾತೆ ಹೊಂದಿದ್ದರು ಆದರೂ ಸರಕಾರಿ ಬಸ್ಸ್ ಬಿಡಲು ಅವರಿಂದ ಸಾದ್ಯವಾಗಲಿಲ್ಲ.

ಈಗ ಕಾಂಗ್ರೆಸ್ ಸರಕಾರ ನೀಡಿದ ಭರವಸೆಗಳು ಅನುಷ್ಠಾನಗೊಂಡು ಜನರ ಆಶೋತ್ತರಗಳು ಈಡೇರಿಕೆಯಾಗಿದೆ. ಉಚಿತ ಯೋಜನೆಗಳ ಕುರಿತು ಬಿಜೆಪಿಗರಿಂದಲೇ ಟೀಕೆ ಬಂತು.ಆದರೂ ಎದೆಗುಂದಲಿಲ್ಲ.ಉಚಿತ ಯೋಜನೆಯ ಫಲವಾಗಿ ಬೈಲೂರು-ಪಳ್ಳಿ ಮಾರ್ಗವಾಗಿ ಕೆಎಸ್ಆರ್ ಟಿಸಿ.ಸರ್ಕಾರೀ ಬಸ್ ಓಡಾಡುತ್ತಿದೆ.

ನುಡಿದಂತೆ ನಡೆಯುವ ಸರಕಾರ ಇದ್ದರೆ ಅದು ಕಾಂಗ್ರೆಸ್ ಸರಕಾರ ಎಂಬುವುದನ್ನು ಕಾರ್ಕಳ ಜನತೆ ಅರಿತುಕೊಂಡಿದ್ದಾರೆ. ಸರಕಾರಿ ಬಸ್ಸ್ ಕೊಡುಗೆ ನೀಡಿದ ಕರ್ನಾಟಕ ಸರಕಾರಕ್ಕೆ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಧನ್ಯವಾದ ಸಲ್ಲಿಸಿದ್ದಾರೆ.

   

LEAVE A REPLY

Please enter your comment!
Please enter your name here