ಪಳ್ಳಿ – ನಿಂಜೂರು ಗ್ರಾಮಸ್ಥರಿಗೆ ಸಂತಸದ ಕ್ಷಣ-ದಿನಕರ ಶೆಟ್ಟಿ

0

ಪಳ್ಳಿ – ನಿಂಜೂರು ಗ್ರಾಮಸ್ಥರಿಗೆ ಸಂತಸದ ಕ್ಷಣ.

ನಮ್ಮ ಊರಿಗೆ ಸರಕಾರಿ ಬಸ್ಸು ಬಂದಿದೆ. ಹಲವಾರು ವರ್ಷದ ಕನಸು ನನಸಾಗಿದೆ. ಎಲ್ಲರಿಗು ಸಂತಸದ ಸುದ್ಧಿ ಅದರಲ್ಲೂ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಎಲ್ಲಿಲ್ಲದ ಖುಷಿ. ಯಾಕೆಂದರೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಯಲ್ಲಿ ಒಂದಾದ ಶಕ್ತಿ ಯೋಜನೆಯ ಸರಕಾರಿ ಬಸ್ಸುಗಳಲ್ಲಿ ಉಚಿತ ಬಸ್ಸು ಪ್ರಯಾಣ ಸೌಲಭ್ಯ ಸಿಕ್ಕಿದಂತಾಗುತ್ತದೆ. ನಾಳೆ ಬೆಳಿಗ್ಗೆ 10 ಗಂಟೆಗೆ ಪಳ್ಳಿ- ನಿಂಜೂರು ಗ್ರಾಮಸ್ಥರು ಎಲ್ಲರು ಸೇರಿ ಪಳ್ಳಿ ಜೋಡುರಸ್ತೆಯಲ್ಲಿ ಸರಕಾರಿ ಬಸ್ಸು ಗೆ ಅರ್ಚಕರ ಮೂಲಕ ಪೂಜೆ ಮಾಡಿಸಿ ಸ್ವಾಗತಿಸಲಿದ್ದಾರೆ.

ಈ ಬಸ್ಸು ಬರಲು ಕಾರಣಕರ್ತರಾದ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಸಂಸದರಾದ ಜಯ ಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ ಹಾಗು ಕಾರ್ಕಳ ಕಾಂಗ್ರೆಸ್ ನಾಯಕರಾದ ಶ್ರೀ ಉದಯ ಶೆಟ್ಟಿ ಮುನಿಯಾಲು ಅವರಿಗೆ ಪಳ್ಳಿ – ನಿಂಜೂರು ಗ್ರಾಮಸ್ಥರ ಪರವಾಗಿ ತುಂಬು ಹೃದಯದ ಧನ್ಯವಾದಗಳು.

ಈ ಶುಭ ಕಾರ್ಯಕ್ರಮಕ್ಕೆ ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಕುಮಾರ್ ಶೆಟ್ಟಿ ಮುನಿಯಾಲು ಹಾಗು ಕಾರ್ಕಳ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾದ ಶುಭದ ರಾವ್ ಮತ್ತು ಇನ್ನಿತರ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ.ಪಳ್ಳಿ – ನಿಂಜೂರು ಹೆಚ್ಚಿನ ಗ್ರಾಮಸ್ಥರು ಸಮಯವಕಾಶ ಮಾಡಿಕೊಂಡು ಬಂದು ಈ ಶುಭ ಸಂದರ್ಭದಲ್ಲಿ ಬಾಗವಹಿಸಬೇಕಾಗಿ ವಿನಯ ಪೂರ್ವಕವಾಗಿ ವಿನಂತಿಸುತ್ತೇನೆ.

ದಿನಕರ ಶೆಟ್ಟಿ
ಪಳ್ಳಿ – ನಿಂಜೂರು

   

LEAVE A REPLY

Please enter your comment!
Please enter your name here