Tuesday, February 3, 2026
Google search engine
Homeಕಾರ್ಕಳಪತಿಯ ಅನೈತಿಕ ಸಂಭಂದ ಪ್ರಶ್ನಿಸಿದ್ದ ಪತ್ನಿಯ ಕೊಲೆ-ಆರೋಪಿ ಸುನೀಲ್ ಬಂಧನ

ಪತಿಯ ಅನೈತಿಕ ಸಂಭಂದ ಪ್ರಶ್ನಿಸಿದ್ದ ಪತ್ನಿಯ ಕೊಲೆ-ಆರೋಪಿ ಸುನೀಲ್ ಬಂಧನ

ಪತಿಯ ಅನೈತಿಕ ಸಂಭಂದ ಪ್ರಶ್ನಿಸಿದ್ದ ಪತ್ನಿಯ ಕೊಲೆ-ಆರೋಪಿ ಸುನೀಲ್ ಬಂಧನ

ಕಾರ್ಕಳ:ಪತಿಯ ಅನೈತಿಕ ಸಂಭಂದ ಪ್ರಶ್ನಿಸಿದ್ದ ಪತ್ನಿಯನ್ನು ಮಾರಾಕಾಸ್ತ್ರದಿಂದ ಹಲ್ಲೆಮಾಡಿ ಕೊಲೆಗೈದ ಘಟನೆ ಕಾರ್ಕಳ ತಾಲೂಕು ನೂರಾಳ್ ಬೆಟ್ಟು ಗ್ರಾಮದ ಗುಮ್ಮೆತ್ತು ಎಂಬಲ್ಲಿ ನಡೆದಿದ್ದು ಆರೋಪಿ ಗಂಡ ಸುನೀಲ್ ಕುಮಾರ್ (44) ಎಂಬಾತನನ್ನು ಬಂಧಿಸಲಾಗಿದೆ.

ಕಾರ್ಕಳ ತಾಲೂಕು ನೂರಾಳ್ ಬೆಟ್ಟು ಗ್ರಾಮದ ಗುಮ್ಮೆತ್ತು ನಿವಾಸಿ ಶ್ರೀಮತಿ ಗೀತಾ ಮತ್ತು ಅವರ ಗಂಡ ಸುನೀಲ್ ಕುಮಾರ್ ಇವರ ಮಧ್ಯೆ ಜ.27 ರಂದು ಬೆಳಗ್ಗೆ 9:50 ಗಂಟೆ ಸುಮಾರಿಗೆ ಗಲಾಟೆ ನಡೆದಿದ್ದು ಸುನೀಲ್ ಕುಮಾರ್ ಪತ್ನಿ ಗೀತಾ ಮೇಲೆ ಮಾರಾಕಾಸ್ತ್ರದಿಂದ ಹಲ್ಲೆ ನಡೆಸಿದ್ದ.

ಗಂಭೀರ ಗಾಯಗೊಂಡಿದ್ದ ಗೀತಾ ಇವರು ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಇಲ್ಲಿ ತೀವೃ ನಿಗಾ ಘಟಕದಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿ ಸುನೀಲ್ ಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಗಾಯಾಳು ಗೀತಾ ಚಿಕಿತ್ಸೆಗೆ ಸ್ಪಂದಿಸದೇ ಫೆ.02 ರಂದು  ಮೃತಪಟ್ಟಿದ್ದಾರೆ. ಠಾಣೆಯಲ್ಲಿ ಈಗಾಗಲೇ ದಾಖಲಾದ ಕೊಲೆ ಯತ್ನ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿ ಪ್ರಕರಣದ ಕಾನೂನು ಕಲಂ 109 ಅನ್ನು 103(1) ಭಾರತೀಯ ನ್ಯಾಯ ಸಂಹಿತೆ 2023 ನಂತೆ ಪರಿವರ್ತಿಸಿ ತನಿಖೆ ನಡೆಸಲಾಗುತ್ತಿದೆ.

 

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments