ಕಾರ್ಕಳ:ಮರದಿಂದ ಬಿದ್ದು ತ್ರಿಪುರ ಮೂಲದ ಕಾರ್ಮಿಕ ಮೃತ್ಯು
ಮರದಿಂದ ಬಿದ್ದು ತ್ರಿಪುರ ಮೂಲದ ಕಾರ್ಮಿಕ ಮೃತಪಟ್ಟ ಘಟನೆ ಕಾರ್ಕಳ ತಾಲೂಕು ಕಲ್ಯಾದಲ್ಲಿ ನಡೆದಿದೆ.ಅವಯ್ ಮಂಜ ದೆಬ್ರಮ್ (34) ಮೃತ ದುರ್ದೈವಿ.
ದೆಬ್ರಮ್ ಕಳೆದ 3 ತಿಂಗಳಿನಿಂದ ಕಲ್ಯಾ ಗ್ರಾಮದ ಅಶೋಕನಗರದ ಕೋಟಿಬೆಟ್ಟು ಬಿಜು ಎಂಬವರ ರಬ್ಬರ್ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದು ರಬ್ಬರ್ ಮರ ಹತ್ತಿ ಕೆಲಸ ಮಾಡುತ್ತಿರುವ ಸಂದರ್ಭ ಮರದಿಂದ ಬಿದ್ದಿದ್ದಾರೆ.
ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದೆಬ್ರಮ್ ಚಿಕಿತ್ಸೆಗೆ ಸ್ಪಂದಿಸದೆ ಜೂನ್ 03ರಂದು ರಾತ್ರಿ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.