ಹೆಬ್ರಿ: ಕಾಪೌಂಡ್ ಗೆ ಗುದ್ದಿದ ಕಾರು; ಚಾಲಕ ಪ್ರಾಣಾಪಾಯದಿಂದ ಪಾರು
ಹೆಬ್ರಿ- ಉಡುಪಿ ರಾಷ್ಟ್ರೀಯ ಹೆದ್ದಾರಿ ಎಸ್.ಆರ್. ಸ್ಕೂಲ್ ಬಳಿ ವೇಗವಾಗಿ ಬಂದ ಕಾರು ಗುರು ಕೃಪಾ ಕಾಂಪೌಂಡ್ ಗೆ ಗುದ್ದಿದ ಘಟನೆ ನಡೆದಿದೆ. ಘಟನೆ ಪರಿಣಾಮ ಕಾರು ಪಲ್ಟಿಯಾಗಿದ್ದು, ಕಾಂಪೌಂಡ್ ದ್ವಂಸಗೊಂಡಿದೆ. ಅದೃಷ್ಟಾವಶಾತ್ ಕಾರಿನ ಚಾಲಕ ಪ್ರಾಣಾಯಾಪದಿಂದ ಪಾರಾಗಿದ್ದಾರೆ.
ಹತ್ತಿರದಲ್ಲಿ ಶಾಲೆ ಇದ್ದು ವಿದ್ಯಾರ್ಥಿಗಳು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಆಗಿದ್ದರೆ ಬಾರಿ ಅನಾಹುತವಾಗುತ್ತಿತ್ತು. ಕಿರಿದಾದ ರಸ್ತೆ ಇರುವ ಸಂದರ್ಭದಲ್ಲಿ ಅನಾಹುತಗಳು ಆಗುತ್ತಿರಲಿಲ್ಲ. ಈಗ ರಸ್ತೆ ಅಗಲೀಕರಣ ಆದ ಬಳಿಕ ಅನಾಹುತಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ.
ಶಾಲಾ ವಠಾರದಲ್ಲಿ ವಾಹನ ಚಾಲಕರು ನಿಯಮ ಮೀರಿ ಅತಿ ವೇಗವಾಗಿ ಬರುತ್ತಿದ್ದು, ಪೊಲೀಸರು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ.