ಈದು:ಪರಸ್ಪರ ಯುವಕ ಮಂಡಲ ಮತ್ತು ಪರಸ್ಪರ ಸೇವಾ ಬ್ರಿಗೇಡ್ ಪದಗ್ರಹಣ
ಅಧ್ಯಕ್ಷರಾಗಿ ಅಶೋಕ್ ಎಂ.ಕೆ. ಮತ್ತು ಪ್ರವೀಣ್ ದೇವಾಡಿಗ ಆಯ್ಕೆ
ಪರಸ್ಪರ ಯುವಕ ಮಂಡಲ (ರಿ) ಪರಸ್ಪರ ಸೇವಾ ಬ್ರಿಗೇಡ್ ಈದು -ನಾರಾವಿ ಇದರ ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಾರ್ಯಕ್ರಮವು ಈದು ಶ್ರೀರಾಮ್ ಪ್ಯಾಲೆಸ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಹೊಸ್ಮರ್ ವಿಜಯ ಕ್ಲಿನಿಕ್ ನ ಡಾllಪ್ರಸಾದ್.ಬಿ. ಶೆಟ್ಟಿ ಅವರು ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಪರಸ್ಪರ ಯುವಕ ಮಂಡಲದ ಗೌರಧ್ಯಕ್ಷರಾದ ಜಗದೀಶ್ ಅಂಚನ್ ವಹಿಸಿದರು.
ಗೌರವ ಸಲಹೆಗಾರರಾಗಿ ಡಾllಪ್ರಸಾದ್ ಬಿ. ಶೆಟ್ಟಿ,ಗುರುಪ್ರಸಾದ್ ನಾರಾವಿ,ಪ್ರಸಾದ್ ಪೂಜಾರಿ,ರತೇಶ್ ಕುಮಾರ್,ಗೌರವಧ್ಯಕ್ಷರಾಗಿ ಜಗದೀಶ್ ಅಂಚನ್,ಪರಸ್ಪರ ಯುವಕ ಮಂಡಲದ ಅಧ್ಯಕ್ಷರಾಗಿ ಅಶೋಕ್ ಎಂ.ಕೆ,ಉಪಾಧ್ಯಕ್ಷರಾಗಿ ಚಂದಪ್ಪ ಪೂಜಾರಿ,ಪ್ರಧಾನ ಕಾರ್ಯದರ್ಶಿಯಾಗಿ ರಜತ್ ದೇವಾಡಿಗ, ಕಾರ್ಯದರ್ಶಿಯಾಗಿ ಸುಮಂತ್ ಶೆಟ್ಟಿ, ಕೋಶಧಿಕಾರಿಯಾಗಿ ಅಶೋಕ್ ದೇವಾಡಿಗ,ಜೊತೆ ಕಾರ್ಯದರ್ಶಿಯಾಗಿ ಸುರೇಶ್ ಮಠದಬೆಟ್ಟುಸಂಘಟನಾ ಕಾರ್ಯದರ್ಶಿಯಾಗಿ ಭರತ್ ದೇವಾಡಿಗ ಸಾಮಾಜಿಕ ಸಾಮಾಜಿಕ ಜಾಲತಾಣ ಸಮಿತಿಯ ಸದಸ್ಯರಾಗಿ ಯಶವಂತ್ ಮಠದ ಬೆಟ್ಟ, ರಾಜೇಶ್ ಮಠದ ಬೆಟ್ಟು
ಪರಸ್ಪರ ಸೇವಾ ಬ್ರಿಗೇಡಿನ ಅಧ್ಯಕ್ಷರಾಗಿ ಪ್ರವೀಣ್ ದೇವಾಡಿಗ,ಉಪಾಧ್ಯಕ್ಷರಾಗಿ ಸುಧೀರ್ ಪೂಜಾರಿ,ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ್ ಎಂ ಕೆ ಕಾರ್ಯದರ್ಶಿಯಾಗಿ ನಿತೇಶ್ ಮಠದ ಬೆಟ್ಟು, ಕೋಶಾಧಿಕಾರಿಯಾಗಿ ಅಣ್ಣು ಮುಗೇರಡ್ಕ,ಜೊತೆ ಕಾರ್ಯದರ್ಶಿ ಸಂದೀಪ್ ಪೂಜಾರಿ ಮುಗೇರಡ್ಕ,ಸಾಮಾಜಿಕ ಜಾಲತಾಣ ಸಮಿತಿಯ ಸದಸ್ಯರಾಗಿ ಸಂತೋಷ ಆಚಾರ್ಯ, ಯಶೋಧರ ದೇವಾಡಿಗ, ಚೇತನ್ ಮುಗೇರಡ್ಕ ಆಯ್ಕೆಯಾದರು.
ಮುಖ್ಯ ಅತಿಥಿಗಳಾಗಿ ನಾರಾವಿ ಗ್ರಾಮ ಪಂಚಾಯತ್ ನ ಸದಸ್ಯರಾದ ವಸಂತ ಪಡ್ಡಾಯಪ್ಪು,ಪರಸ್ಪರ ಯುವಕ ಮಂಡಲದ ಗೌರವ ಸಲಹೆಗಾರರಾದ ಗುರುಪ್ರಸಾದ್ ನಾರಾವಿಪರಸ್ಪರ ಯುವಕ ಮಂಡಲದ ನಿಕಟ ಪೂರ್ವ ಅಧ್ಯಕ್ಷರಾದ ಪ್ರಸಾದ್ ಪೂಜಾರಿ ವಹಿಸಿದರು. ನಿರೂಪಣೆಯನ್ನು ಅಶೋಕ್ ಎಂ.ಕೆ ಪ್ರದೀಪ್ ಎಮ್. ಕೆ ನಿರ್ವಹಿಸಿದ್ದರು.