Saturday, January 31, 2026
Google search engine
Homeಕಾರ್ಕಳಪರರ ಸೇವೆಯಿಂದ ನೆಮ್ಮದಿ ಸಾಧ್ಯ:ಕಾರ್ಕಳ ರೋಟರಿ ಪ್ರೆಸಿಡೆಂಟ್ ನವೀನ್ ಚಂದ್ರ ಶೆಟ್ಟಿ.

ಪರರ ಸೇವೆಯಿಂದ ನೆಮ್ಮದಿ ಸಾಧ್ಯ:ಕಾರ್ಕಳ ರೋಟರಿ ಪ್ರೆಸಿಡೆಂಟ್ ನವೀನ್ ಚಂದ್ರ ಶೆಟ್ಟಿ.

ಪರರ ಸೇವೆಯಿಂದ ನೆಮ್ಮದಿ ಸಾಧ್ಯ:ಕಾರ್ಕಳ ರೋಟರಿ ಪ್ರೆಸಿಡೆಂಟ್ ನವೀನ್ ಚಂದ್ರ ಶೆಟ್ಟಿ.

“ಮಾನವನಲ್ಲಿ ಎಷ್ಟೇ ಹಣವಿದ್ದರೂ, ಎಷ್ಟೇ ಕೀರ್ತಿ ಇದ್ದರೂ ಪರರ ಸೇವೇಗೆ ಜೀವನವನ್ನು ಮುಡಿಪಾಗಿ ಇಟ್ಟರೇ ಮಾತ್ರ ನೆಮ್ಮದಿ ಸಾಧ್ಯ.ಕಾರ್ಕಳ ರೋಟರಿ ಕ್ಲಬ್ ಹಲವಾರು ಜನಹಿತ ಕಾರ್ಯಗಳನ್ನು ನಡೆಸುತ್ತಿರುವ ಸಂಸ್ಥೆಯಾಗಿದೆ.ಸ್ವಚ್ಛತೆಯೊಂದಿಗೆ ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.ಪರಿಸರವನ್ನು ನಾವು ರಕ್ಷಸಿದರೆ ಪರಿಸರವು ನಮ್ಮನ್ನು ರಕ್ಷಣೆ ಮಾಡುತ್ತಾದೆ.ಉಚಿತ ವೈದ್ಯಕೀಯ ಶಿಬಿರ, ರಕ್ತದಾನದಂತಹ ಮಹಾಕಾರ್ಯಗಳು ಕಾರ್ಕಳ ರೋಟರಿ ಕ್ಲಬ್ ವತಿಯಿಂದ ನಡೆದಿವೆ.ಇಂಟರಾಕ್ಟ್ ಕ್ಲಬ್ ನಿಂದ ವಿದ್ಯಾರ್ಥಿಗಳ ಸ್ರಜನಶೀಲತೆಯೊಂದಿಗೆ ಸಮಾಜದ ಭಾಂಧವ್ಯಕೂಡ ಹೆಚ್ಚಾಗುತದೆ.ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪುಗೊಳಿಸುವಲ್ಲಿ ಇಂಟರೆಕ್ಟ್ ಕ್ಲಬ್ ಪ್ರಮುಖ ಪಾತ್ರವನ್ನು ವಹಿಸುತ್ತದೆ ” ಎಂದು ಕೆ. ಎಮ್. ಇ. ಎಸ್. ವಿದ್ಯಾಸಂಸ್ಥೆಯ ಇಂಟರಾಕ್ಟ್ ಕ್ಲಬ್ ಪದಗ್ರಹಣ ಕಾರ್ಯಕ್ರಮ ಉದ್ಘಾಟಿ ಸುತಾ ಕಾರ್ಕಳದ ರೋಟರಿ ಪ್ರೆಸಿಡೆಂಟ್ ರೋಟರಿಯೆನ್ ನವೀನ್ ಚಂದ್ರ ಶೆಟ್ಟಿಯವರು ಅಭಿಪ್ರಾಯ ಪಟ್ಟರು.

ರೋಟೇರಿಯನ್ ಜ್ಯೋತಿ ಪದ್ಮನಾಭ ಬಂಡಿಯವರು ತಮ್ಮ ಭಾಷಣದಲ್ಲಿ “ಮಕ್ಕಳ ಪ್ರತಿಭೆಯನ್ನು ಹೊರತರುವಲ್ಲಿ ಇಂಟರಾಕ್ಟ್ ಕ್ಲಬ್ ಸಹಾಯ ಮಾಡುತದೆ. ಉತಮ ನಾಯಕರನ್ನು ಸೃಷ್ಟಿ ಮಾಡುವುದರಲ್ಲಿ ಉತಮ ಮಾರ್ಗದರ್ಶನವನ್ನೂ ನೀಡುತದೆ. ಹಲವಾರು ಬಾರಿ ರಕ್ತದಾನ ಮಾಡಿರುವ ರೋಟೇರಿಯನ್ ಇಕ್ಬಾಲ್ ಅಹಮ್ಮದ್ ಎಲ್ಲಯುವಕರಿಗೂ ಆದರ್ಶ ಪ್ರಾಯ” ಎಂದರು.

ರೋಟರಿ ಕ್ಲಬ್ಬಿನ ಇಂಟರಾಕ್ಟ್ ವಿಭಾಗದ ಕಾರ್ಯದರ್ಶಿ ಬಾಲಕೃಷ್ಣ ದೇವಾಡಿಗ ಮಾತನಾಡಿ ” ಇಂದಿನ ಮಕ್ಕಳು ಇಂಟರಾಕ್ಟ್ ಕ್ಲಬ್ಬಿಗೆ ಹೆಚ್ಚಿನ ಸಂಖ್ಯೆ ಯಲ್ಲಿ ಸೇರಿ ಸಮಾಜ ಸೇವೆಯ ತರಬೇತಿ ಯನ್ನು ಪಡೆಯಬೇಕು, ಉತಮ ನಾಗರಿಕರಾಗಿ ಹೊರಹೊಮ್ಮಬೇಕು. ” ಎಂದರು.

ಕಾಲೇಜಿನ ಪ್ರಿನ್ಸಿಪಾಲ್ ಕೆ. ಬಾಲಕೃಷ್ಣರವರು ಮಾತನಾಡಿ ” ಇಂಟರೆಕ್ಟ್ ಕ್ಲಬ್ ವಿದ್ಯಾರ್ಥಿಗಳಿಗೆ ನಾಯಕತ್ವ ವನ್ನು ಕಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತದೆ. ಇಂಟರಾಕ್ಟ್ ಕ್ಲಬ್ ನಡೆಸುವ ಹಲವಾರು ಶಿಬಿರಗಳಲ್ಲಿ ಬೇರೆ ಬೇರೆ ಶಾಲೆಯ ವಿದ್ಯಾರ್ಥಿ ಗಳು ಭಾಗವಹಿಸುವುದರಿಂದ ವಿದ್ಯಾರ್ಥಿ ಗಳಲ್ಲಿ ಸಹಬಾಳ್ವೆ, ಸಹಕಾರ, ಸಹಜೀವನದ ಅರಿವಾಗಿ ಉತಮ ವ್ಯಕ್ತಿ ತ್ವ ನಿರ್ಮಾಣ ವಾಗುವುದರಲ್ಲಿ ಸಂದೇಹವಿಲ್ಲ. ಕಾರ್ಕಳ ರೋಟರಿ ಕ್ಲಬ್ ನಡೆಸುವ ನಿಸ್ವಾರ್ಥ ಸೇವೆ ಇಡೀ ದೇಶಕ್ಕೆ ಮಾದರಿ ” ಎಂದು ಅಭಿಪ್ರಾಯ ಪಟ್ಟರು.

ಪ್ರೌಢ ಶಾಲಾ ಮುಖ್ಯಸ್ತೆ ಶ್ರೀಮತಿ ಯವರು ಸ್ವಾಗತಿಸಿದರು.ಶಿಕ್ಷಕಿ ದೀಕ್ಷಾ ರವರು ವಂದಿಸಿದರು. ಎಸ್. ಶೃತಿ ರಾವ್ ರವರು ಕಾರ್ಯಕ್ರಮ ನಿರ್ವಹಿಸಿದರು.

ಪ್ರಾಥ ಮಿಕ ಶಾಲಾ ಮುಖ್ಯಸ್ತೆ ಲೋಲಿಟ ಡಿಸಿಲ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇಂಟರಾಕ್ಟ್ ಕ್ಲಬ್ ನ ಅಧ್ಯಕ್ಷ ರಾದ ಕು. ದಿವ್ಯ ಶೆಟ್ಟಿ, ಕಾರ್ಯದರ್ಶಿ ಆಸ್ಪಿಯಾ, ಕಾರ್ಕಳ ರೋಟರಿ ಕ್ಲಬ್ ಕಾರ್ಯದರ್ಶಿ ರೋಟೇ ರಿಯನ್ ಚೇತನ್ ನಾಯಕ್, ರೋಟೇರಿಯನ್ ಸಾರ್ಜೆಂಟ್ ಆಫ್ ಆರ್ಮ್ ವಸಂತ. ಎಮ್, ರೋಟೇರಿಯನ್ ಶೇಕರ. ಎಸ್, ರೋಟೇರಿಯನ್ ಜೆರಾಲ್ಡ್ ಕುಟಿನೋ, ರೋಟೇರಿಯನ್ ಅರುಣ್ ಕುಮಾರ್ ಶೆಟ್ಟಿ, ರೋಟೇರಿಯನ್ ಶಶಿಧರ್. ಕೆ, ರೋಟೇರಿಯನ್ ಚೇತನ್ ಕುಮಾರ್ ಉಪಸ್ಥಿತರಿದ್ದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments