Monday, February 2, 2026
Google search engine
Homeಕಾರ್ಕಳಸೆ.21 ರಂದು ರಾಣಿ ಅಬ್ಬಕ್ಕ 500ನೇ ಜನ್ಮ ವರ್ಷಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಸ್ಪರ್ಧೆಗೆ ಅಹ್ವಾನ

ಸೆ.21 ರಂದು ರಾಣಿ ಅಬ್ಬಕ್ಕ 500ನೇ ಜನ್ಮ ವರ್ಷಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಸ್ಪರ್ಧೆಗೆ ಅಹ್ವಾನ

 

ಭಾರತೀಯ ಜನತಾ ಪಾರ್ಟಿ ಕಾರ್ಕಳ ಮಂಡಲ ಬೆಳ್ಮಣ್‌ ಮಹಾಶಕ್ತಿಕೇಂದ್ರ, ಮಹಿಳಾ ಮೋರ್ಚಾ ವತಿಯಿಂದ ಸೆ.21 ರಂದು ಭಾರತದ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಅಭಯ ರಾಣಿ ಉಳ್ಳಾಲದ ಅಬ್ಬಕ್ಕ 500ನೇ ಜನ್ಮ ವರ್ಷಾಚರಣೆ ಕಾರ್ಯಕ್ರಮ ಬೆಳ್ಮಣ್ ಶ್ರೀಕೃಷ್ಣ ಸಭಾಭವನದಲ್ಲಿ ನಡೆಯಲಿದೆ.

ಇದರ ಪ್ರಯುಕ್ತ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೈಸ್ಕೂಲ್‌ ಮತ್ತು ಪದವಿಪೂರ್ವ ಕಾಲೇಜು ವಿಧ್ಯಾರ್ಥಿಗಳಿಗೆ ಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ವಿಕಸಿತ ಭಾರತ ವಿಷಯದ ಕುರಿತು ಚಿತ್ರಕಲೆ ಹಾಗು ಅಭಯ ರಾಣಿ ಉಳ್ಳಾಲದ ಅಬ್ಬಕ್ಕ ವಿಷಯದ ಕುರಿತು ಭಾಷಣ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ಪ್ರಥಮ ಬಹುಮಾನವಾಗಿ 2 ಸಾವಿರ ರೂ., ದ್ವಿತೀಯ ಬಹುಮಾನ 1500 ರೂ. ತೃತೀಯ ಬಹುಮಾನವಾಗಿ ಸಾವಿರ ರೂ. ಸಿಗಲಿದೆ.

ಸ್ಪರ್ಧೆಯ ನಿಯಮಗಳು ಈ ಕೆಳಗಿನಂತಿವೆ:
1. ಹೈಸ್ಕೂಲ್‌ ಮತ್ತು ಕಾಲೇಜು ವಿಭಾಗಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳು ನಡೆಯುತ್ತದೆ.
2.ಚಿತ್ರಕಲಾ ಸ್ಪರ್ಧೆಗೆ 45 ನಿಮಿಷ ಮತ್ತು ಭಾಷಣ ಸ್ಪರ್ಧೆಗೆ 3+1 ನಿಮಿಷಗಳ ಅವಕಾಶ.
3. ಚಿತ್ರಕಲಾ ಸ್ಪರ್ಧೆಗೆ ಡ್ರಾಯಿಂಗ್‌ ಪೇಪರ್ ಒದಗಿಸಲಾಗುವುದು. ಉಳಿದೆಲ್ಲಾ ಪರಿಕರಗಳನ್ನು ಸ್ಪರ್ಧಿಗಳು ತರಬೇಕು. ಬಣ್ಣದ ಚಿತ್ರ ಬಿಡಿಸಲು ಅವಕಾಶ ಇರುತ್ತದೆ.
4. ಸ್ಪರ್ಧಿಗಳು ಶಾಲಾ- ಕಾಲೇಜು ಮುಖ್ಯಸ್ಥರಿಂದ ಧೃಡೀಕರಣ ಪತ್ರವನ್ನು ತರವುದು.
5. ಸ್ಪರ್ಧಿಗಳು 18 ಸೆಪ್ಟೆಂಬರ್‌ ಒಳಗೆ ಹೆಸರನ್ನು ದೂರವಾಣಿ ಮೂಲಕ ನೋಂದಾಹಿಸಬಹುದು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments