ಕಾರ್ಕಳ:ಎಂಪಿಎಂ ಕಾಲೇಜಿನಲ್ಲಿ ಅಂತರ್ ಕಾಲೇಜು ಮಟ್ಟದ ಪದವಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆ ತರಂಗ-2K23
ಉಡುಪಿ ಎಂಜಿಎಂ ಕಾಲೇಜು ಪ್ರಥಮ,ಪಿಪಿಸಿ ಕಾಲೇಜು ಧ್ವಿತೀಯ,ಬೆಳ್ತಂಗಡಿ ಕಾಲೇಜು ತೃತೀಯ
ಕಾರ್ಕಳ:ಪೂರ್ವ ವಿದ್ಯಾರ್ಥಿ ಸಂಘ ಮತ್ತು ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ ಇದರ ಜಂಟಿ ಆಶ್ರಯದಲ್ಲಿ ಅಂತರ್ ಕಾಲೇಜು ಮಟ್ಟದ ಪದವಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆ ‘ತರಂಗ-2K23’ ಸಾಂಸ್ಕೃತಿಕ ಅಲೆಗಳ ಕಲರವ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ ಇಲ್ಲಿ ನಡೆಯಿತು.
ಉದ್ಘಾಟನೆ:ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಯಮಿ ಅರುಣ್ ಕುಮಾರ್ ನಿಟ್ಟೆ ನೆರವೇರಿಸಿದರು.ಪ್ರಾಂಶುಪಾಲರಾದ ಡಾ.ಕಿರಣ್ ಎಂ.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಸುರೇಶ್ ಅತ್ತೂರು,ಪ್ರಕಾಶ್ ರಾವ್ ಸಾಣೂರು, ಸುರೇಶ್ ಅತ್ತೂರು, ರಾಯ್ ಸುದೀಪ್, ಉಪನ್ಯಾಸಕ ಡಾ.ವಿದ್ಯಾಧರ ಹೆಗ್ಡೆ,ಬೆಳ್ತಂಗಡಿ ಉಪನ್ಯಾಸಕ ಸಂಸ್ಥೆಯ ಹಳೆ ವಿದ್ಯಾರ್ಥಿ ನವೀನ್,ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಆಚಾರ್ಯ,ಕಾರ್ಯಕ್ರಮದ ಸಂಯೋಜಕರಾದ ಅಕ್ಷತಾ ರಾವ್,ಅಜಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಒಟ್ಟು 13 ಕಾಲೇಜನಿಂದ ತಂಡಗಳು ಸ್ಪರ್ಧೆಗೆ ಆಗಮಿಸಿದ್ದವು.ಪ್ರಥಮ ಸ್ಥಾನವನ್ನು ಎಂಜಿಎಂ ಕಾಲೇಜು ಉಡುಪಿ,ಧ್ವಿತೀಯ ಸ್ಥಾನವನ್ನು ಪಿಪಿಸಿ ಕಾಲೇಜು ಉಡುಪಿ,ತೃತೀಯ ಸ್ಥಾನವನ್ನು ಸರ್ಕಾರೀ ಪ್ರಥಮದರ್ಜೆ ಕಾಲೇಜು ಬೆಳ್ತಂಗಡಿ ಪಡೆದುಕೊಂಡಿತು.
ಬಹುಮಾನ ವಿತರಣೆ ಸಂದರ್ಭ ಡಾ.ಕಿರಣ್ ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಆಚಾರ್ಯ,ಉಪನ್ಯಾಸಕರಾದ ಡಾ.ವಿದ್ಯಾಧರ ಹೆಗ್ಡೆ,ಸಂತೋಷ್ ಪೂಜಾರಿ,ಪೂರ್ವ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನವೀನ್,ಪೂರ್ವ ವಿದ್ಯಾರ್ಥಿ ಸಂಘದ ಗೌರವ ಸಲಹೆಗಾರ ಸಂದೀಪ್ ಹೆಗ್ಡೆ,ಕಾರ್ಯಕ್ರಮ ಸಂಯೋಜಕರಾದ ಅಕ್ಷತಾ ರಾವ್,ಅಜಿತ್ ಉಪಸ್ಥಿತರಿದ್ದರು.