ಕರಾಟೆ ಸ್ಪರ್ಧೆಯಲ್ಲಿ ಕೆರ್ವಾಶೆಯ ಆಯುಷ್ ಪಿ. ಅಂಚನ್ ಸಾಧನೆ
ಮುಕ್ತ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೆರ್ವಾಶೆಯ ಆಯುಷ್ ಪಿ. ಅಂಚನ್ ಸಾಧನೆಗೈದಿದ್ದಾರೆ.ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಸ್ಟೇಡಿಯಂ ನಲ್ಲಿ ನಡೆದ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ ಶಿಪ್ ನ ಕುಮಿಟೆ ವಿಭಾಗದಲ್ಲಿ ಧ್ವಿತೀಯ ಸ್ಥಾನ ಹಾಗೂ ಕಟಾ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಆಯುಷ್ ಪಿ. ಅಂಚನ್ ಕಾರ್ಕಳ ಯುವವಾಹಿನಿ ಘಟಕದ ಅಧ್ಯಕ್ಷರಾದ ಪ್ರಕಾಶ್ ಪೂಜಾರಿಯವರ ಪುತ್ರ.ಆಯುಷ್ ಸಾಧನೆಗೆ ಕಾರ್ಕಳ ಯುವವಾಹಿನಿ ಘಟಕ ಅಭಿನಂದನೆ ಸಲ್ಲಿಸಿದ್ದಾರೆ.















