ಅತ್ಯಾಚಾರಕ್ಕೆ ಒಳಗಾದ ಕಾರ್ಕಳದ ಯುವತಿಯ ಮನೆಗೆ ತೆರಳಿ ಆರ್ಥಿಕ ಸಹಕಾರ ನೀಡಿ ಧೈರ್ಯ, ಸ್ಥೈರ್ಯ ತುಂಬಿದ ಕಾರ್ಕಳ ಟೈಗರ್ಸ್

0

ಅತ್ಯಾಚಾರಕ್ಕೆ ಒಳಗಾದ ಕಾರ್ಕಳದ ಯುವತಿಯ ಮನೆಗೆ ತೆರಳಿ ಆರ್ಥಿಕ ಸಹಕಾರ ನೀಡಿ ಧೈರ್ಯ, ಸ್ಥೈರ್ಯ ತುಂಬಿದ ಕಾರ್ಕಳ ಟೈಗರ್ಸ್

ಅತ್ಯಾಚಾರಕ್ಕೊಳಗಾದ ಕುಕ್ಕುಂದೂರುವಿನ ಸಂತ್ರಸ್ತೆ ಯುವತಿಯ ಮನೆಗೆ ಇಂದು ಕಾರ್ಕಳ ಟೈಗರ್ಸ್ ಭೇಟಿ ನೀಡಿದೆ.ಟೈಗರ್ಸ್ ಬಳಗ ಯುವತಿಯ ತಾಯಿ ಹಾಗೂ ಮನೆಯವರಿಗೆ ಧೈರ್ಯ, ಸ್ಥೈರ್ಯ ತುಂಬಿ ಆರ್ಥಿಕ ಸಹಕಾರ ನೀಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಉದ್ಯಮಿ ಹಾಗೂ ಸಮಾಜ ಸೇವಕರಾದ ಬೋಳ ಪ್ರಶಾಂತ್ ಕಾಮತ್ ರವರು ಯಾವುದೇ ಸಂದರ್ಭದಲ್ಲಿ ಕೂಡ ಟೈಗರ್ಸ್ ಬಳಗ ಯುವತಿ ಹಾಗೂ ಆಕೆಯ ಮನೆಯವರ ರಕ್ಷಣೆಗಾಗಿ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ .

ಯಾವುದೇ ವಿಚಾರದಲ್ಲಿ ಕೂಡ ಸಂಕಷ್ಟ ಬಂದರೂ ಟೈಗರ್ಸ್ ಬಳಗಕ್ಕೆ ತಿಳಿಸಿ ಎಂದು ಟೈಗರ್ಸ್ ಬಳಗ ಮನವಿ ಮಾಡಿದೆ.ಯುವತಿಯ ತಾಯಿಗೆ ಈ ಸಂದರ್ಭದಲ್ಲಿ ಆರ್ಥಿಕ ಸಹಕಾರ ನೀಡಲಾಯಿತು.
ಈ ಸಂದರ್ಭದಲ್ಲಿ ಕಾರ್ಕಳ ಟೈಗರ್ಸ್ ತಂಡದ ಅಜಿತ್ ಕಾಮತ್, ಹರೀಶ್ ಅಮೀನ್, ಅನಂತ ಕೃಷ್ಣ ಶೆಣೈ, ಪ್ರದೀಪ್ ಶೃಂಗಾರ್, ವಸಂತ್ ಕುಮಾರ್, ಶ್ರೀನಾಥ್ ಆಚಾರ್ಯ, ಪ್ರವೀಣ್ ಕುಲಾಲ್, ಅರುಣ್ ದೇವಾಡಿಗ ಸದಸ್ಯರು ಉಪಸ್ಥಿತರಿದ್ದರು

   

LEAVE A REPLY

Please enter your comment!
Please enter your name here