Saturday, April 18, 2026
Google search engine
Homeಕಾರ್ಕಳಕಾರ್ಕಳ ಪುರಸಭೆ ವ್ಯಾಪ್ತಿಯ ಅಡ್ಡರಸ್ತೆಗಳ ನಾಮಫಲಕಗಳಿಗೆ ಪುನರ್ಜೀವ ನೀಡಿದ ಮಾಜಿ ಪುರಸಭೆ ಸದಸ್ಯ ...

ಕಾರ್ಕಳ ಪುರಸಭೆ ವ್ಯಾಪ್ತಿಯ ಅಡ್ಡರಸ್ತೆಗಳ ನಾಮಫಲಕಗಳಿಗೆ ಪುನರ್ಜೀವ ನೀಡಿದ ಮಾಜಿ ಪುರಸಭೆ ಸದಸ್ಯ ಪ್ರಕಾಶ್ ರಾವ್

ಕಾರ್ಕಳ ಪುರಸಭೆ ವತಿಯಿಂದ ಸುಮಾರು 15 ವರ್ಷಗಳ ಹಿಂದೆ ಅಡ್ಡರಸ್ತೆಗಳಿಗೆ ಅಳವಡಿಸಲಾದ ನಾಮಫಲಕಗಳು ಬಿದ್ದು, ಅಕ್ಷರಗಳು ಕಾಣದಂತಹ ಪರಿಸ್ಥಿತಿಯನ್ನು ಮನಗಂಡು ಪುರಸಭೆ ಮಾಜಿ ಸದಸ್ಯ, ಸಮಾಜ ಸೇವಕರಾದ ಪ್ರಕಾಶ್ ರಾವ್ ಅವರು ಕಾಳಿಕಾಂಬಾ ಪರಿಸರದ ನಾಮಫಲಕಗಳಿಗೆ ಪುನರ್ ಜೀವ ನೀಡುವ ಕಾರ್ಯ ಕೈಗೊಂಡಿದ್ದಾರೆ .

ವಿಶೇಷತೆಯೇನೆಂದರೆ ಬಿದ್ದು ಹೋದ ನಾಮ ಫಲಕಗಳನ್ನು ಸರಿಪಡಿಸಿ ಅಡ್ಡರಸ್ತೆಗಳ ಹೆಸರನ್ನು ಬರೆಸಿ, ನಾಮಫಲಕಕ್ಕೆ ಮಳೆನೀರು ಬೀಳದಂತೆ ಮೇಲ್ಚಾವಣಿಯನ್ನು ನಿರ್ಮಿಸಿದ್ದಾರೆ.

ಇಂತಹ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿದ ಒಬ್ಬ ಮಾಜಿ ಪುರಸಭಾ ಸದಸ್ಯನ ಕಾರ್ಯವೈಖರಿಯನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments