ಗಣಿತನಗರ: ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದಲ್ಲಿ ತಿಂಗಳ ಸರಣಿಯ ಮೌಲ್ಯಸುಧಾ ಕಾರ್ಯಕ್ರಮದ 50ನೇ ಮಾಲಿಕೆಯ ಸುವರ್ಣ ಸಂಭ್ರಮವು ಜುಲೈ 11ರ ಶನಿವಾರದಂದು ಸಂಜೆ 06:15ಕ್ಕೆ ನಡೆಯಲಿದೆ. ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಪುರಸ್ಕೃತ ‘ರಾಷ್ಟ್ರದೇವೋಭವ’ ಖ್ಯಾತಿಯ ಸನಾತನ ನಾಟ್ಯಾಲಯ, ಮಂಗಳೂರು ಇವರಿಂದ “ಸನಾತನ ರಾಷ್ಟ್ರಾಂಜಲಿ” ಎಂಬ ವಿಶೇಷ ಕಾರ್ಯಕ್ರಮವು ಪ್ರಸ್ತುತಗೊಳ್ಳಲಿದೆ. ಕಲಾಸಕ್ತರೂ ಭಾಗವಹಿಸಬಹುದೆಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.



















