ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಕಳ ಹಾಗೂ NSUI ಕಾರ್ಕಳ ಆಶ್ರಯದಲ್ಲಿನೀಟ್ ಪರೀಕ್ಷೆ ಅಕ್ರಮ, ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಲಾಠಿ ಚಾಜ್೯, ಹಾಗೂ ಕಾಂಗ್ರೆಸ್ ನಾಯಕರ ಬಂಧನ ಖಂಡಿಸಿ ಒಂದು ದಿನದ ಧರಣಿ ಸತ್ಯಾಗ್ರಹವನ್ನು ದಿನಾಂಕ 25 ಜುಲೈ ಬೆಳಿಗ್ಗೆ 9 ರಿಂದ ರಾತ್ರಿ 8 ವರೆಗೆ ಅನಂತಶಯನ ವೃತ್ತದ ಬಳಿ ಹಮ್ಮಿಕೊಳ್ಳಲಾಗಿದೆ.
ಈ ಸಭೆಯಲ್ಲಿ ಮಾನವ ಸರಪಳಿ, ಸಾರ್ವಜನಿಕ ಸಂವಾದ , ಮತ್ತು ಮೃತ ವಿದ್ಯಾರ್ಥಿಗಳಿಗೆ ಮೊಂಬತ್ತಿ ಹಚ್ಚಿ ಶೃದ್ದಾಂಜಲಿಯನ್ನು ಸಲ್ಲಿಸಲಿದ್ದೇವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


















