Thursday, August 27, 2026
Google search engine
Homeರಾಜ್ಯಕಸ್ತೂರಿ ರಂಗನ್ ವರದಿ ಮಲೆನಾಡಿನ ಜನತೆಗೆ ಮಾರಕ. ಒಪ್ಪಲು ಸಾಧ್ಯವೇ ಇಲ್ಲ. - ಡಿ.ಕೆ.ಶಿವಕುಮಾರ್.

ಕಸ್ತೂರಿ ರಂಗನ್ ವರದಿ ಮಲೆನಾಡಿನ ಜನತೆಗೆ ಮಾರಕ. ಒಪ್ಪಲು ಸಾಧ್ಯವೇ ಇಲ್ಲ. – ಡಿ.ಕೆ.ಶಿವಕುಮಾರ್.

ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಸ್ತೂರಿರಂಗನ್ ವರದಿ ಮಲೆನಾಡಿನ ಜನರಿಗೆ ಮಾರಕ. ವರದಿಯನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಕಸ್ತೂರಿ ರಂಗನ್ ವರದಿ ವ್ಯಾಪ್ತಿಯ ಭಾಗದ ಶಾಸಕರ ಜೊತೆ ಧೀರ್ಘ ಮಾತುಕತೆ ನಡೆಸಿದ ಬಳಿಕ ಮುಖ್ಯಮಂತ್ರಿ ಯವರು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ತುರ್ತು ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆದು, ವರದಿ ವಿರುದ್ಧ ನಿರ್ಣಯ ಮಂಡಿಸಿ ಕೇಂದ್ರ ಸರ್ಕಾರಕ್ಕೆ ತಿಳಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಇದು ನಮ್ಮದು ಸರಿಯಾದ ನಿರ್ಧಾರ. ರಾಜ್ಯ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳುತ್ತದೆ.

ಕಸ್ತೂರಿ ರಂಗನ್ ವರದಿಯಲ್ಲಿ ಪಶ್ಚಿಮ ಘಟ್ಟಗಳ ಸೂಕ್ಷ್ಮ ವಲಯ ಎಂದಿದೆ. ನಮ್ಮ ರಾಜ್ಯದ 10ಜಿಲ್ಲೆ 33 ತಾಲೂಕು 20668ಚ.ಕಿ.ಮಿ ಪ್ರದೇಶ ಕರ್ನಾಟಕದ್ದು ಇದರ ವ್ಯಾಪ್ತಿಯಲ್ಲಿದೆ. ಇದರಿಂದ ಯಾವ ರೀತಿ ನಮ್ಮವರನ್ನು ರಕ್ಷಿಸಬೇಕೆಂದು ನೋಡ್ತೇವೆ. ಈ ವರದಿಯನ್ನ ಯಾವುದೇ ಕಾರಣಕ್ಕೂ ಒಪ್ಪಲ್ಲ. ಕ್ಯಾಬಿನೆಟ್‌ನಲ್ಲಿ ತರುತ್ತೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments