ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಛತ್ರಪತಿ ಶಿವಾಜಿ ಜಯಂತಿ ಆಚರಣೆ
‘ಶಿವನೇರಿ ಜನಕನ ಸಿಂಹಘಡದ ಚರಿತ್ರೆ’-ಗಿರೀಶ್ ರಾವ್ ಛತ್ರಪತಿ
ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಮಹಾರಾಜರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆಯ ಮೂಲಕ ಆಚರಿಸಲಾಯಿತು.ದೇವಸ್ಥಾನದ ಆಡಳಿತ ಮೊಕ್ತೆಸರರದ ಗಿರೀಶ್ ರಾವ್ ಇವರು ದೀಪ ಪ್ರಜ್ವಲಿಸಿ ಶಿವಾಜಿಯ ಶಿವನೇರಿ ಜನಕನ ಸಿಂಹಘಡದ ಚರಿತ್ರೆಯ ಬಗ್ಗೆ ಉಲ್ಲೇಖಿಸಿ ಉದ್ಘಾಟನಾ ಭಾಷಣವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಮೊಕ್ತೆಸರರಾದ ಗಣೇಶ್ ರಾವ್ ರಾಮಚಂದ್ರರಾವ್ ಸುಧೀಂದ್ರರಾವ್ ಉಪಸ್ಥಿತರಿದ್ದರು.
ಇರೋ ಕಿಡ್ಸ್ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.
ರಾಜೇಂದ್ರ ರಾವ್ ಕಾರ್ಯಕ್ರಮ ನಿರೂಪಿಸಿ ಶ್ರೀಮತಿ ಶಾಂತಿ ವಂದಿಸಿದರು.