ಕಾರ್ಕಳ : ಸುನಿಲ್ ಕುಮಾರ್ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ
ರಾಮ ಬೇಕೋ, ಅಲ್ಲ ಬೇಕೋ ಅಂದಿದ್ದ ಸುನಿಲ್ ಕುಮಾರ್ ; ವಿಚಾರಣೆಗೆ ಹೈಕೋರ್ಟ್ ತಡೆ
ಕಳೆದ 2018ರ ವಿಧಾನಸಭಾ ಚುನಾವಣೆ ಸಂದರ್ಭ ಮಾಡಿದ್ದ ವಿವಾದಾತ್ಮಕ ಭಾಷಣಕ್ಕೆ ಮಾಜಿ ಸಚಿವ ವಿ. ಸುನೀಲ್ ಕುಮಾರ್ ವಿರುದ್ದ ಬಿ.ಸಿ. ರೋಡ್ ಠಾಣೆ ಪೊಲೀಸರು ನಡೆಸುತ್ತಿದ್ದ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ.
ಕಲ್ಲಡ್ಕದಲ್ಲಿ ರಾಜೇಶ್ ನಾಯ್ಕ್ ರವರ ಪರ ಚುನಾವಣಾ ಪ್ರಚಾರ ನಡೆಸುವ ಸಂದರ್ಭ ಉಗ್ರ ಭಾಷಣ ಮಾಡಿದ್ದ ಸುನೀಲ್ ಕುಮಾರ್ ರಾಮ ಬೇಕೋ, ಅಲ್ಲಾ ಬೇಕೋ ? ಎಂದು ಪ್ರಶ್ನೆಮಾಡಿದ್ದರು. ಇದಕ್ಕೆ ಸಂಬಂಧಿಸಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಬಿ.ಸಿ.ರೋಡ್ ಪೊಲೀಸರು ಇತ್ತೀಚೆಗೆ ಆರೋಪ ಪಟ್ಟಿ ದಾಖಲಿಸಿ ವಿಚಾರಣೆ ಪ್ರಾರಂಭಿಸಿದ್ದರು.