ಕಾರ್ಕಳ: ಶ್ರೀ ಗಂಧದ ಮರಗಳನ್ನು ಕಳವುಗೈದ ಘಟನೆ ನಡೆದಿದೆ.ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಹೇನೊಟ್ಟು ದಿನೇಶ್ ಎಂಬುವವರು 16 ವರ್ಷದ ಹಿಂದೆ ತಮ್ಮ ಜಾಗದಲ್ಲಿ 225 ಶ್ರೀಗಂಧದ ಸಸಿಗಳನ್ನು ನೆಟ್ಟಿದ್ದು ಜೂ.16ರಂದು ಬೆಳಿಗ್ಗೆ 08:30 ಗಂಟೆಗೆ ತೋಟಕ್ಕೆ ಹೋದಾಗ ಎಲ್ಲಾ ಶ್ರೀಗಂಧದ ಮರಗಳು ಇದ್ದು ಮರುದಿನ ದಿನಾಂಕ ಜೂ.17 ರಂದು ಬೆಳಿಗ್ಗೆ ತೋಟಕ್ಕೆ ಹೋದಾಗ 9 ಮರಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ.
ಕಳವಾದ ಮರಗಳ ಮೌಲ್ಯ ರೂ 4,00,000 ಅಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬೆಳಕಿಗೆ ಬಂದಿದೆ