ಎರಡು ತಂಡಗಳು ಹೊಡೆದಾಡಿಕೊಂಡ ಘಟನೆ ಬೈಲೂರಿನಲ್ಲಿ ನಡೆದಿದೆ.ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೌಡೂರು ನಿವಾಸಿ ಚರಣ್ (22) ಎಂಬುವವರು ದೂರು ನೀಡಿದ್ದಾರೆ.
ದೂರಿನಲ್ಲಿ ಉಲ್ಲೇಖಿಸಿದಂತೆ ಜೂ.21ರಂದು ಚರಣ್ ರವರು ಬೈಲೂರು ಪಳ್ಳಿ ಕ್ರಾಸ್ ಬಳಿ ನಿಂತುಕೊಂಡಿರುವಾಗ ಅಶ್ವಿನ್ ಮತ್ತು ವಿಷ್ಣು ಎಂಬವರು ಕುಡಿದುಕೊಂಡು ಬಂದು ಜೋರಾಗಿ ಮಾತನಾಡಿ ಹೋಗಿದ್ದು, ಮರುದಿನ ಪಂಚನಬೆಟ್ಟು ಎಂಬಲ್ಲಿ ಕೆಲಸ ಮಾಡುತ್ತಿರುವಾಗ ಅಶ್ವಿನ್ ಎಂಬಾತನು ಪದೇ ಪದೇ ಪೋನ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿದ್ದಾನೆ.
ರಾತ್ರಿ ಚರಣ್ ರಂಗಪಲ್ಕೆಯ ಕೀರ್ತಿ ಬಾರ್ನ ಪಕ್ಕದ ರಸ್ತೆಯಲ್ಲಿ ನಿಂತುಕೊಂಡಿರುವಾಗ, ಆರೋಪಿಗಳಾದ ಬೈಲೂರಿನ ಸುಜಿತ್, ವಿಷ್ಣು, ಅಶ್ವಿನ್, ಮಂಜುನಾಥ ಜಾರ್ಕಳ, ಯಶವಂತ್ ಹಾಗೂ ಇನ್ನೊಬ್ಬ ವ್ಯಕ್ತಿಯು ಬೈಕಿನಲ್ಲಿ ಬಂದು ಆರೋಪಿ ವಿಷ್ಣು ಎಂಬಾತನು ಚರಣ್ ಗೆ ತಲವಾರಿನಿಂದ ಹೊಡೆಯಲು ಬಂದಿದ್ದು, ಜಗನ್ನಾಥ್ ಮತ್ತು ಸುಂದರ್ ರವರು ತಡೆಯಲು ಹೋದಾಗ, ವಿಷ್ಣು ಎಂಬಾತನು ಜಗನ್ನಾಥ್ರವರಿಗೆ ಮುಖಕ್ಕೆ ಕೈಯಿಂದ ಹೊಡೆದ ಪರಿಣಾಮ ಜಗನ್ನಾಥ್ ಗಾಯಗೊಂಡಿದ್ದು, ಆರೋಪಿಗಳಾದ ಸುಜಿತ್ ಮತ್ತು ವಿಷ್ಣು ಎಂಬುವವರು ಸುಂದರ್ ರವರಿಗೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 84/2025 ಕಲಂ 189(2),191(2), 191(3), 115(1), 118(1), 352, 351(2) r/w 190 BNS and 3(1)(r)(s),3(2)(v-a) SC/ST (POA) Act ನಂತೆ ಪ್ರಕರಣ ದಾಖಲಾಗಿರುತ್ತದೆ.