
ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ಕಾರ್ಕಳ ತಾಲೂಕು ಮಟ್ಟದ ತ್ರೈ ಮಾಸಿಕ ಕೆಡಿಪಿ ಸಮಿತಿಗೆ ಸುಜಿತ್ ಕುಮಾರ್ ಜಾರ್ಕಳ, ರುಕ್ಮಯ್ಯ ಶೆಟ್ಟಿಗಾರ್ ಕುಕ್ಕುಂದೂರು, ಗೋಪಾಲ್ ಪಂಡಿಬೆಟ್ಟು ರೆಂಜಾಳ, ಸಂತೋಷ್ ಪೂಜಾರಿ ಮಾಳ, ಎಂ.ಪಿ. ಮೊಯಿನಬ್ಬ ಇನ್ನಾ ಮತ್ತು ಅಮಿತಾ ಶೆಟ್ಟಿ ಸಾಣೂರು ಇವರನ್ನು ಸದಸ್ಯರಾಗಿ ತಕ್ಷಣಕ್ಕೆ ಜಾರಿಗೆ ಬರುವಂತೆ ಆದೇಶಿಸಿದೆ.












