ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ:ಹೈಕೋರ್ಟ್ ನಲ್ಲಿ ಅರ್ಜಿ ವಜಾ

0

ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ:ಅರ್ಜಿ ಹೈಕೋರ್ಟ್ ನಲ್ಲಿ ವಜಾ

ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನ ಇದರ ವ್ಯವಸ್ಥಾಪನಾ ಸಮಿತಿಯಲ್ಲಿ ಇಬ್ಬರು ಸದಸ್ಯರ ನೇಮಕದ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದು ಇದೀಗ ಕೋರ್ಟ್ ಅರ್ಜಿಯನ್ನು ವಜಾ ಮಾಡಿದೆ.

ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಅಧ್ಯಕ್ಷರಾಗಿದ್ದ ತಾರಾನಾಥ್ ಕೋಟ್ಯಾನ್ ಸೂರಾಲು ಹಾಗೂ ಸದಸ್ಯರಾಗಿದ್ದ ರಮಾಕಾಂತ್ ಶೆಟ್ಟಿ ಕರ್ಮರ್ ಕಟ್ಟೆರವರು ಪಕ್ಷದ ಹುದ್ದೆಯೊಂದರಲ್ಲಿ ಇದ್ದಾರೆ,ರಾಜಕೀಯ ಪಕ್ಷದ ಹುದ್ದೆಯಲ್ಲಿದ್ದವರು ವ್ಯವಸ್ಥಾಪನಾ ಸಮಿತಿಯಲ್ಲಿ ಸದಸ್ಯರಾಗುವಂತಿಲ್ಲ.ಈ ಇಬ್ಬರು ಸದಸ್ಯರ ವಿರುದ್ಧ ರೋಹಿತ್ ಶೆಟ್ಟಿ ಮಿಯ್ಯಾರು ಹಾಗೂ ಸತ್ಯೇ೦ದ್ರ ನಾಯಕ್ ಹೈಕೋರ್ಟ್ ಮೊರೆ ಹೋಗಿದ್ದರು.

ಆದರೆ ಹೈಕೋರ್ಟ್ ಅರ್ಜಿಯನ್ನು ವಜಾ ಮಾಡಿದೆ.ತಾರಾನಾಥ್ ಎಸ್ ಕೋಟ್ಯಾನ್ ಹಾಗೂ ರಮಾಕಾಂತ್ ಶೆಟ್ಟಿ ಕರ್ಮರ್ ಕಟ್ಟೆರವರು ಪಕ್ಷದ ಹುದ್ದೆಗಳಿಗೆ ಈಗಾಗಲೇ ರಾಜೀನಾಮೆ ನೀಡಿದ್ದರಿಂದ ವ್ಯವಸ್ಥಾಪನಾ ಸಮಿತಿಯಲ್ಲಿ ಮುಂದುವರಿಯಲಿದ್ದಾರೆ.

   

LEAVE A REPLY

Please enter your comment!
Please enter your name here