ನಿಟ್ಟೆ ರೋಟರಿ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಬಡ ಕುಟುಂಬಕ್ಕೆ ಧನಸಹಾಯ ವಿತರಣೆ

0

ಪ್ರತಿಷ್ಠಿತ ನಿಟ್ಟೆ ರೋಟರಿ ಕ್ಲಬ್ ನ ಪದಗ್ರಹಣ ಸಮಾರಂಭದ ಸಂದರ್ಭದಲ್ಲಿ ರೋಟರಿ ಸೇವಾ ಕಾರ್ಯಕ್ರಮದ ಅಂಗವಾಗಿ ನಿಟ್ಟೆ ಪರಿಸರದ 780 ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ, ನಂದಳಿಕೆ ಗ್ರಾಮದ ಬಡ ಕುಟುಂಬಕ್ಕೆ ಪೀಠೋಪಕರಣಕ್ಕಾಗಿ ಧನ ಸಹಾಯ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.

ಈ ಸಮಾರಂಭದಲ್ಲಿ ರೋಟರಿ ಕ್ಲಬ್ ನಿಟ್ಟೆ ಇದರ 2025-26ನೇ ಸಾಲಿನ ನೂತನ ಅಧ್ಯಕ್ಷರಾದ ರೋ. ಡಾ. ರಘುನಂದನ್ ಕೆ. ಆರ್ ಹಾಗೂ ಕಾರ್ಯದರ್ಶಿ ರೋ. ಶೈಲಜ ವಿ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ರೋ. ಪ್ರೊಫೆಸರ್ ಎಂ. ಬಾಲಕೃಷ್ಣ ಶೆಟ್ಟಿ, 2025-26ನೇ ಸಾಲಿನ ಸಹಾಯಕ ಗವರ್ನರ್ ವಿಘ್ನೇಶ್ ಶೆಣೈ , ವಲಯ ಸೇನಾನಿ ಪ್ರಶಾಂತ್ ಬೆಳಿರಾಯ, 2024-25ನೇ ಸಾಲಿನ ಸಹಾಯಕ ಗವರ್ನರ್ ಅನಿಲ್ ಡೇಸಾ, 2024-25ನೇ ಸಾಲಿನ ವಲಯ ಸೇನಾನಿ ಸುರೇಶ್ ನಾಯಕ್, ನಿರ್ಗಮನ ಅಧ್ಯಕ್ಷ ಸತೀಶ್ ಕುಮಾರ್ ಕೆ ಉಪಸ್ಥಿತರಿದ್ದರು.

   

LEAVE A REPLY

Please enter your comment!
Please enter your name here