ಇನ್ನಾ: ಬಾರಿನಲ್ಲಿ ಗಲಾಟೆ-ಚಾಕು ಇರಿದು ಕೊಲೆಗೆ ಯತ್ನ

0

ಮೂರು ವರ್ಷಗಳ ಹಿಂದೆ ಉತ್ತರ ಪ್ರದೇಶದ ಹುಡುಗನೊಬ್ಬನಿಗೆ ಹೊಡೆದ ವಿಚಾರ ಪ್ರಶ್ನಿಸಿದ್ದಕ್ಕೆ ಕೋಪಗೊಂಡು ಚೂರಿ ಇರಿದು ಕೊಲೆಗೆ ಯತ್ನಿಸಿದ ಘಟನೆ ಕಾಂಜಾರಕಟ್ಟೆ ಗ್ಲೋರಿಯ ಬಾರ್ ನಲ್ಲಿ ನಡೆದಿದೆ.

ಅಲಗೇಶ ಕೊಲೆಗೆ ಯತ್ನಿಸಿದ ಆರೋಪಿಯಾಗಿದ್ದು, ಬಾರ್ ನಲ್ಲಿ ಸತೀಶ್, ನರಸಿಂಹ, ಕಾರ್ತಿಕ್ ಎಂಬವರು ಕುಳಿತಿದ್ದ ಕ್ಯಾಬಿನ್ ಗೆ ನುಗ್ಗಿ ಏರುಧ್ವನಿಯಲ್ಲಿ ಅವ್ಯಾಚ್ಯ ಶಬ್ದಗಳಿಂದ ಬೈದ್ದು ಗಲಾಟೆ ಮಾಡಿದ್ದಾನೆ. ಈ ವೇಳೆ ಸತೀಶ್ ಗಲಾಟೆ ಮಾಡುವುದನ್ನು ಪ್ರಶ್ನಿಸಿದಕ್ಕೆ ಆರೋಪಿ ಕೋಪಗೊಂಡು ನಿನ್ನನ್ನು ಕೊಲ್ಲುವುದಾಗಿ ಹೇಳಿ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ಸತೀಶ್ ರವರ ತಲೆ ಮತ್ತು ಹೊಟ್ಟೆಯ ಭಾಗಕ್ಕೆ ಗಾಯವಾಗಿದ್ದು, ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಗಾಯಾಳು ಸತೀಶ್ ನೀಡಿದ ದೂರಿನ ಮೇರೆಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

   

LEAVE A REPLY

Please enter your comment!
Please enter your name here