ಲಯನ್ಸ್ ಕ್ಲಬ್ ಕಾರ್ಕಳ ಸಿಟಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 15ರಂದು ಹೋಟೆಲ್ ಮಯೂರ ಇಂಟರ್ನ್ಯಾಷನಲ್ ನಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಗೋಪಾಲ್ ಅಂಚನ್, ಕಾರ್ಯದರ್ಶಿಯಾಗಿ ನಿಹಾಲ್ ಶೆಟ್ಟಿ ಜಕ್ಕನ್ ಮಕ್ಕಿ ಮತ್ತು ಕೋಶಾಧಿಕಾರಿಯಾಗಿ ಶಾಲಿನಿ ರವಿ ಸುವರ್ಣ ಆಯ್ಕೆಯಾದರು.
ಪದಗ್ರಹಣ ಸಮಾರಂಭವನ್ನು ಜಿಲ್ಲೆ 317 ಸಿ ಇದರ ಸಾಂಸ್ಕೃತಿಕ ಕಾರ್ಯಕ್ರಮದ ಸಂಯೋಜಕ ಹಾಗೂ ಸಿಕ್ಸ್ ಡೈಮಂಡ್ ರಂಜನ್ ಕಲ್ಕೂರ ಅವರು ನೆರವೇರಿಸಿ, ಪದಗ್ರಹಣದ ಜೊತೆಗೆ ಲಯನ್ಸ್ ಕ್ಲಬ್ ಕಾರ್ಕಳ ಸಿಟಿಯ ಕಾರ್ಯವೈಖರಿಯ ಬಗ್ಗೆ ಮಾತನಾಡಿದರು. ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿಯ ಜೊತೆಗೆ ಅಂತರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಬಗ್ಗೆ ಮಾಹಿತಿಯನ್ನು ನೀಡಿದರು.
ಜಿಲ್ಲೆಯ ಮಾಜಿ ಗವರ್ನರ್ ಎನ್ ಹೆಗಡೆಯವರು ಲಯನ್ಸ್ ಕ್ಲಬ್ ಕಾರ್ಕಳ ಸಿಟಿಗೆ ನೂತನವಾಗಿ ಸೇರ್ಪಡೆಯಾಗಿರುವಂತಹ 8 ಮಂದಿ ಸದಸ್ಯರಿಗೆ ಪ್ರತಿಜ್ಞೆಯನ್ನು ಬೋಧಿಸಿದರು.
ಸೇವಾ ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತ್ಯುನ್ನತ ಅಂಕಗಳಿಸಿರುವಂತಹ ಇಬ್ಬರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗಾಗಿ ಸಹಾಯಧನ ಹಸ್ತಾಂತರಿಸಲಾಯಿತು.
ಗೌರವ ಸನ್ಮಾನ ಮತ್ತು ಸಂಗೀತ ಕಲಾವಲ್ಲಭ ಬಿರುದು
ಈ ಸಮಾರಂಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿ 2025 ನೇ ಸಾಲಿನ ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಗಾಯನ ಮಾಡಿರುವ ಏಕವ್ಯಕ್ತಿ ಗಾಯನವನ್ನು 24 ಗಂಟೆಗಳ ಕಾಲ ನಿರರ್ಗಳವಾಗಿ ಹಾಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿರುವಂತ ವಿದ್ವಾನ್ ಯಶವಂತ ಎಂ. ಜಿ., ಇವರನ್ನು ಗೌರವ ಸನ್ಮಾನದ ಮೂಲಕ ಸಂಗೀತ ಕಲಾ ವಲ್ಲಭ ಎಂಬ ಬಿರುದನ್ನು ನೀಡಿ ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ವತಿಯಿಂದ ಸನ್ಮಾನಿಸಲಾಯಿತು.
ಅಕ್ಷರ ದಾಸೋಹ ಕಾರ್ಯಕ್ರಮದಡಿ ಕರ್ತವ್ಯ ನಿಭಾಯಿಸಿ ವಯೋ ನಿವೃತ್ತಿಯನ್ನು ಹೊಂದಿರುವ ಮತ್ತು ನಲ್ಲೂರು ಪರಪ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 22 ವರ್ಷ ಸೇವೆಯನ್ನು ನೀಡಿರುವಂತಹ ಶಾರದಾ ಅವರನ್ನು ಗೌರವಿಸಲಾಯಿತು. ಅಂತರಾಷ್ಟ್ರೀಯ ಮಟ್ಟದ ಯೋಗಪಟು ಸುಷ್ಮಾ ತೆಂಡೂಲ್ಕರ್ ಥೈಲ್ಯಾಂಡ್ ನಲ್ಲಿ ಜರುಗಿದ ಆರನೇ ಇಂಟರ್ನ್ಯಾಷನಲ್ ಯೋಗ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನವನ್ನು ಪಡೆದು ಬೆಳ್ಳಿಯ ಪದಕವನ್ನು ಪಡೆದಿರುವ ಇವರನ್ನು ಗೌರವಿಸಲಾಯಿತು.
ನೂತನ ಅಧ್ಯಕ್ಷರಾದ ಗೋಪಾಲ್ ಅಂಚನ್ ಮಾತನಾಡಿ ಮುಂದಿನ ಅವಧಿಗೆ ಎಲ್ಲರ ಸಹಕಾರವನ್ನು ಬಯಸಿದರು.
ಸಭೆಯಲ್ಲಿ ಪ್ರಾಂತೀಯ ಅಧ್ಯಕ್ಷ ಗುರುಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಸುರೇಶ್ ಶೆಟ್ಟಿ , ವಲಯ್ಯಾಧ್ಯಕ್ಷ ದಿನೇಶ್ ಕುಮಾರ್ ಉಪಸ್ಥಿತರಿದ್ದರು. ಅಕ್ಷತಾ ನಾಯಕ್ ಪ್ರಾರ್ಥನೆಯನ್ನು ನೆರವೇರಿಸಿ, ಧ್ವಜ ವಂದನೆಯನ್ನು ಆರಾಧ್ಯ ನಡೆಸಿದರು. ಜ್ಯೋತಿ ರಮೇಶ್ ಸ್ವಾಗತಿಸಿದರು. ಪೂರ್ಣಿಮಾ ಶೆಣೈ ನಿರೂಪಿಸಿ, ಕಾರ್ಯದರ್ಶಿ ನಿಹಾಲ್ ಶೆಟ್ಟಿ ಜಕ್ಕನ್ಮಕ್ಕಿ ಧನ್ಯವಾದವಿತ್ತರು.
ಸದಸ್ಯರಾದ ರಘುನಾಥ್ ಕೆ.ಎಸ್., ಟಿ. ಕೆ. ರಘುವೀರ್, ಕೆ.ಪಿ. ಪದ್ಮಾವತಿ, ಶಾಲಿನಿ ಸುವರ್ಣ, ರಿತಾ ಶೆಟ್ಟಿ, ಯೋಗೇಶ್ ನಾಯಕ್ ಮತ್ತು ಧೀರಜ್ ಸಹಕರಿಸಿದರು.