ಉಡುಪಿಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಪರಿಣಾಮ ಸಹ ಸವಾರೆ ಗಂಭೀರ ಗಾಯಗೊಂಡ ಘಟನೆ ಆ.3 ರಂದು ನಡೆದಿದೆ.ಉಷಾ ಗಾಯಗೊಂಡವರು.
ಸ್ಕೂಟರ್ ನಲ್ಲಿ ಅಂಬಲಪಾಡಿ ದೇವಸ್ಥಾನಕ್ಕೆ ತೆರಳಿ ಕಾರ್ಕಳ ಕಡೆ ವಾಪಸ್ಸಾಗುವ ವೇಳೆ ರಾತ್ರಿ 7.30 ರ ಸುಮಾರಿಗೆ ನೀರೆ ಗ್ರಾಮದ ನೀರೆಜೆಡ್ಡುವಿನಲ್ಲಿ ನಿಯಂತ್ರಣ ತಪ್ಪಿ ಸ್ಕೂಟರ್ ಉರುಳಿ ಬಿದ್ದಿದೆ. ಹಿಂಬದಿ ಕುಳಿತಿದ್ದ ಉಷಾರವರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಾಹೀರಾತು




































