
ಹೊಸ ಬೆಳಕು ಆಶ್ರಮದಲ್ಲಿ ದಾಖಲಾಗಿದ್ದ ಕುಂದಾಪುರ ಮೂಲದ ಉಮೇಶ್ ಎನ್ನುವ ವ್ಯಕ್ತಿ ಅನಾರೋಗ್ಯದ ಕಾರಣದಿಂದ ಮೃತಪಟ್ಟಿದ್ದಾರೆ.
ಉಮೇಶ ಎನ್ನುವವರನ್ನು ಕಳೆದ ನಾಲ್ಕು ವರ್ಷಗಳ ಹಿಂದೆ ಕುಂದಾಪುರ ಬಳಿ ಬುದ್ದಿ ಮಾಂದ್ಯನಾಗಿ ತಿರುಗುತ್ತಿದ್ದ ವೇಳೆ ಹೊಸ ಬೆಳಕು ಆಶ್ರಮಕ್ಕೆ ದಾಖಲಿಸಲಾಗಿತ್ತು. ಕಳೆದ ಒಂದು ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿ ಬಳಲುತ್ತಿದ್ದ ಇವರು ಗುರುವಾರದಂದು ಆಶ್ರಮದಲ್ಲಿ ತಮ್ಮ ಕೊನೆಯುಸಿರೆಳೆದಿದ್ದಾರೆ.












