Sunday, January 25, 2026
Google search engine
Homeಕಾರ್ಕಳನಿಟ್ಟೆ: ಡಾ.ಎನ್ ಎಸ್.ಎ.ಎಮ್ ಪ್ರಥಮದರ್ಜೆ ಕಾಲೇಜಿನ ಸುಸ್ಥಿರ ಅಭಿವೃದ್ದಿ ಕೋಶ ಉದ್ಘಾಟನೆ

ನಿಟ್ಟೆ: ಡಾ.ಎನ್ ಎಸ್.ಎ.ಎಮ್ ಪ್ರಥಮದರ್ಜೆ ಕಾಲೇಜಿನ ಸುಸ್ಥಿರ ಅಭಿವೃದ್ದಿ ಕೋಶ ಉದ್ಘಾಟನೆ

 

ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮದರ್ಜೆ ಕಾಲೇಜಿನ ಸುಸ್ಥಿರ ಅಭಿವೃದ್ಧಿ ಗುರಿಗಳ ಕೋಶವನ್ನು ಆ.8 ರಂದು ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಎಸ್.ಆರ್.ಎಲ್.ಎಂ. ತರಭೇತುದಾರ ಕೆ. ದೀಪಕ್ ಕಾಮತ್ ಕಾಂಜರಕಟ್ಟೆ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ‘ನಮ್ಮ ಪರಿಸರವನ್ನು ಸ್ವಚ್ಚವಾಗಿಡುವಲ್ಲಿ ನಮ್ಮ ಜವಬ್ದಾರಿ ‘ ವಿಷಯದ ಕುರಿತು ಕೆ. ದೀಪಕ್ ಕಾಮತ್ ಕಾಂಜರಕಟ್ಟೆ ಉಪನ್ಯಾಸ ನೀಡಿದರು. ಪರಿಸರದ ಕುರಿತ ಮಾನವರ ಬೇಜವಾಬ್ದಾರಿ ನಡೆಯೇ ಪರಿಸರ ವಿನಾಶಕ್ಕೆ ಕಾರಣವಾಗಿದೆ, ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗ, ನಮ್ಮ ನಮ್ಮನ್ನು ಸುಚಿ- ಸೌಂದರ್ಯವಾಗಿ ಇಟ್ಟುಕೊಂಡಂತೆ ಪರಿಸರವನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವುದು ನಮ್ಮ ಕರ್ಥವ್ಯವಾಗಬೇಕು. ಇದಕ್ಕಾಗಿ ದೊಡ್ಡ ದೊಡ್ಡ ಕೆಲಸಗಳನ್ನು ಮಾಡಬೇಕಾಗಿಲ್ಲ, ನಮ್ಮ ನಮ್ಮ ಮನೆಗಳಲ್ಲಿಯೇ ಕಸದ ನಿರ್ವಹಣೆ, ಏಕ ಬಳಕೆ ವಸ್ತುಗಳನ್ನು ಬಳಸದೇ ಇರುವುದು, ಟೆಟ್ರ ಪ್ಯಾಕೇಟ್ ಗಳನ್ನು ಬಳಸದೇ ಇರುವದು ಇಂತಹದ್ದೇ ಸಣ್ಣ ಸಣ್ಣ ಚಟುವಟಿಕೆಗಳಿಂದ ನಾವು ನಮ್ಮ ಪರಿಸರವನ್ನು ಉಳಿಸಿಕೊಳ್ಳಬಹುದು, ಜೊತೆಗೆ ಎಲ್ಲರಲ್ಲೂ ‘ನನ್ನ ತ್ಯಾಜ್ಯ ನನ್ನ ಜವಾಬ್ದಾರಿ’ ಎನ್ನುವ ಪರಿಕಲ್ಪನೆ ರೂಪುಗೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ವೀಣಾ ಕುಮಾರಿ ಬಿ.ಕೆ. ಮಾತನಾಡಿ ಅಭಿವೃದ್ದಿ ಎಂದರೆ ಕೇವಲ ಮೂಲಭೂತ ಸೌಕರ್ಯಗಳನ್ನು ಉನ್ನತೀಕರಿಸುವುದು ಮಾತ್ರವಲ್ಲ, ಮುಂದಿನ ತಲೆಮಾರಿಗೆ ಈ ಪರಿಸರ ಮತ್ತು ನಾವು ಪ್ರಕೃತಿಯಿಂದ ಪಡೆದ ಸೌಲಭ್ಯಗಳನ್ನು ಮುಂದಿನ ತಲೆಮಾರಿಗೆ ದಾಟಿಸುವುದೂ ಅಭಿವೃದ್ದಿ ಎಂದು ತಿಳಿಸಿದರು. ಸುಸ್ಥಿರ ಅಭಿವೃದ್ಧಿ ಗುರಿಗಳ ಕೋಶವೂ ಈ ಕುರಿತು ಯುವ ಜನತೆಗೆ ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ, ಐಕ್ಯೂಎಸಿ ಸಂಯೋಜಕರಾದ ಪ್ರಕಾಶ್ ಉಪಸ್ಥಿತರಿದ್ದರು. ಸುಸ್ಥಿರ ಅಭಿವೃದ್ಧಿ ಗುರಿಗಳ ಕೋಶದ ಸಂಯೋಜಕಿ ಸೌಮ್ಯ ಎಂ.ಜೆ ಅತಿಥಿಗಳನ್ನು ಸ್ವಾಗತಿಸಿದರು. ಸುಸ್ಥಿರ ಅಭಿವೃದ್ಧಿ ಗುರಿಗಳ ಕೋಶದ ಕಾರ್ಯದರ್ಶಿ ಕುಮಾರಿ ಶ್ರೀನಿಧಿ ಮೆಂಡನ್ ವಂದಿಸಿದರು. ಕುಮಾರಿ ಲೀಶಾ ಕಾರ್ಯಕ್ರಮವನ್ನು ನಿರೂಪಿಸಿದರು.

 

 

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments