
ವ್ಯಕ್ತಿಯೋರ್ವರು ವಿದ್ಯುತ್ ತಂತಿ ಬಳಸಿ ನೇಣಿಗೆ ಶರಣಾದ ಘಟನೆ ಆ. 19 ರಂದು ಹಿರ್ಗಾನದ ಸ್ವಾಗತ್ ವೈನ್ಸ್ ಪಕ್ಕದ ಕಟ್ಟಡದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಹಿರ್ಗಾನ ಗ್ರಾಮದ ಕಾನಾಂಗಿ ನಿವಾಸಿ ಮಂಜುನಾಥ ಎಂದು ಗುರ್ತಿಸಲಾಗಿದ್ದು, ಇವರು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದು, ಇದೇ ಕಾರಣ ಅಥವಾ ಇನ್ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಸಾವಿಗೆ ಶರಣಾಗಿದ್ದಾರೆ.
ಈ ಬಗ್ಗೆ ಮೃತರ ಮಗ ನೀಡಿದ ದೂರಿನ ಅನ್ವಯ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












