ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾಂಡು ದೇವಾಡಿಗರವರಿಗೆ ಸನ್ಮಾನ

0

 

ಅಂಗ ವೈಕಲ್ಯವನ್ನು ಮೀರಿ ಪಾಂಡು ದೇವಾಡಿಗರವರ ವಾದ್ಯ ಸೇವೆ, ಧಾರ್ಮಿಕ ಚಿಂತನೆಗಳಿಗೆ ನಮ್ಮೆಲ್ಲರನ್ನ ಹತ್ತಿರ ಮಾಡಿದೆ-ಗಿರೀಶ್ ರಾವ್, ಆಡಳಿತ ಮೊಕ್ತೆಸರರು ಶ್ರೀ ಕ್ಷೇತ್ರ ಹಿರಿಯಂಗಡಿ

ವಾದ್ಯ ಕಲಾ ಸೇವೆಯನ್ನು ನಿರಂತರವಾಗಿ ಧಾರ್ಮಿಕ ಸೇವೆಗಳಿಗೆ ನೀಡುತ್ತಾ ಬಂದ ಕಾರ್ಕಳದ ಅತ್ಯಂತ ಹಿರಿಯ ವಾದ್ಯಗಾರ ಪಾಂಡು ದೇವಾಡಿಗರವರು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವುದರಿಂದ. ಅವರು ಶ್ರೀ ಕ್ಷೇತ್ರ ಹಿರಿಯoಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ 40 ವರ್ಷಗಳ ಕಾಲ ನಿರಂತರವಾಗಿ ನೀಡಿದ ಹಾಗೂ ನೀಡುತ್ತಿರುವ ಸೇವೆಯನ್ನ ಸ್ಮರಿಸಿ ದೇವಳದ ಆಡಳಿತ ಮಂಡಳಿಯ ಪರವಾಗಿ ದೀಪೋತ್ಸವದ ಸಂದರ್ಭ ಗೌರವ ಸಮರ್ಪಿಸಲಾಯಿತು.

ಈ ಸಂದರ್ಭ ಕ್ಷೇತ್ರದ ಆಡಳಿತ ಮೊಕ್ತೆಸರ ಗಿರೀಶ್ ರಾವ್, ಮೊಕ್ತೆಸರರಾದ ಸುಧೀಂದ್ರ ರಾವ್ ದಯಾನಂದ ರಾವ್ ರಾಮಚಂದ್ರರಾವ್ ಹಾಗೂ ತಾನೋಜಿ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here