ಶ್ರೀ ಗುರು ಜನರಲ್ ಸ್ಟೋರ್ ಮತ್ತು ಲೇಡೀಸ್ ಟೈಲರಿಂಗ್ ಶುಭಾರಂಭ

0

ಕಾರ್ಕಳದ ಬಲಿಪರಪ್ಪಾಡಿಯಲ್ಲಿ ನೂತನವಾಗಿ ಶ್ರೀ ಗುರು ಜನರಲ್ ಸ್ಟೋರ್ ಮತ್ತು ಲೇಡೀಸ್ ಟೈಲರಿಂಗ್ ಅಂಗಡಿಯು ನ.೫ ರಂದು ಉದ್ಘಾಟನೆಗೊಂಡಿತು.

ರೆಂಜಾಳ ದಿನೇಶ್ ಆಚಾರ್ಯರು ನೂತನವಾಗಿ ಆರಂಭಿಸಿದ ಈ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ, ಕಾರ್ಕಳ ನೆಕ್ಲಾಜೆ ಕಾಳಿಕಾಂಬ ದೇವಸ್ಥಾನದ ಧರ್ಮದರ್ಶಿ ಶಿಲ್ಪಿ ರಾಮಚಂದ್ರ ಆಚಾರ್ಯರು ಉದ್ಘಾಟನೆ ಮಾಡಿ ಸಂಸ್ಥೆಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಾಣೂರು ಹರೀಶ್ ಪುರೋಹಿತರು, ಪ್ರಕಾಶ್ ಜೈನ್ ರೆಂಜಾಳ, ಅರಣ್ಯ ಇಲಾಖೆಯ ACF ಸತೀಶ್ ಆಚಾರ್ಯ ಕಾರ್ಕಳ, ವಿ.ಬಿ.ಎಸ್ ಸಭಾ ರೆಂಜಾಳ ಇದರ ಅಧ್ಯಕ್ಷ ಹರೀಶ್ ಆಚಾರ್ಯ, ವಾಸು ಆಚಾರ್ಯ ಪರಪು ಮುಂಬೈ, ಇರ್ವತ್ತೂರು ಗ್ರಾಮ ಮೊಕ್ತೇಸರ್ ಉದಯ ಆಚಾರ್ಯ, ಸದಾನಂದ ಎಸ್ ಆಚಾರ್ಯ, ಯಕ್ಷತೀರ್ಥ ಕಲಾಸೇವೆ ನೂರಳಬೆಟ್ಟು ಇವರೆಲ್ಲರೂ ಭಾಗವಹಿಸಿದರು.

LEAVE A REPLY

Please enter your comment!
Please enter your name here