Home ಕಾರ್ಕಳ ಕಾರ್ಕಳದಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಕೇಸ್ ಬಗ್ಗೆ ಪೋಲಿಸರು ನಿಷ್ಪಕ್ಷಪಾತ ತನಿಖೆ ಮಾಡಬೇಕು.-ಅನಿತಾ ಡಿಸೋಜ

ಕಾರ್ಕಳದಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಕೇಸ್ ಬಗ್ಗೆ ಪೋಲಿಸರು ನಿಷ್ಪಕ್ಷಪಾತ ತನಿಖೆ ಮಾಡಬೇಕು.-ಅನಿತಾ ಡಿಸೋಜ

0

ಕಾರ್ಕಳದಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಕೇಸ್ ಬಗ್ಗೆ ಪೋಲಿಸರು ನಿಷ್ಪಕ್ಷಪಾತ ತನಿಖೆ ಮಾಡಬೇಕು. ಯುವತಿಗೆ ಬಿಯರ್ ನಲ್ಲಿ ಅಮಲು ಪದಾರ್ಥವನ್ನು ಬೆರೆಸಿ ನಾಲ್ಕೈದು ಮಂದಿ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತ ಯುವತಿ ಕೇಸ್ ದಾಖಲಿಸಿದ್ದಾರೆ.

ಅವಳ ಹೇಳಿಕೆಯಂತೆ ಆಕೆಗೆ ಮದ್ಯಪಾನ ಮಾಡುವ ಚಟವಿದೆಯಾ ಅನ್ನುವ ಬಗ್ಗೆ ಅನುಮಾನ ಮೂಡಿಸುತ್ತಿದೆ. ಬಿಯರ್ ಒಂದು ಮದ್ಯಪಾನದ ಪೇಯ ಇದಕ್ಕೆ ಅಮಲು ಪದಾರ್ಥ ಸೇರಿಸುವ ಅಗತ್ಯ ಏನು ಬಂತು? ಕುಡಿಯುವ ಚಟ ಯಾರಿಗಿತ್ತು ಮತ್ತು ಯಾವ ಮಟ್ಟಕ್ಕೆ ಇದೆ ಎಂದೂ ಕೂಲಾಂಕುಶವಾಗಿ ಪರಿಶೀಲನೆ ಮಾಡಬೇಕು.

ಅತ್ಯಾಚಾರ ಮಾಡಿದ್ದಾರೆ ಎನ್ನಲಾದ ಆರೋಪಿಗಳು ಹಿಂದೂ,ಮುಸ್ಲಿಂ ಮತ್ತು ಕ್ರೈಸ್ತ ಧರ್ಮಕ್ಕೆ ಸೇರಿದವರಾಗಿದ್ದಾರೆ ಹೀಗಿರುವಾಗ ಇದು ಲವ್ ಜಿಹಾದ್ ಹೇಗಾಗುತ್ತದೆ…?.

ಕಾರ್ಕಳದ ಶಾಸಕ ಸುನೀಲ್ ಕುಮಾರ್ ವಿರುದ್ಧ ಸರಕಾರಿ ಸಿಮೆಂಟ್ ಕಳ್ಳತನ ಮತ್ತು ದುರುಪಯೋಗ ಹಾಗೂ ಥೀಮ್ ಪಾರ್ಕ್ ನಲ್ಲಿ ಸ್ಥಾಪಿಸಿದ ಪರಶುರಾಮನ ಮೂರ್ತಿಯ ಅವ್ಯವಹಾರದ ಬಗ್ಗೆ ಗಂಭೀರವಾದ ಆರೋಪವಿದ್ದು ಈ ಬಗ್ಗೆ ರಾಜ್ಯ ಸರಕಾರ ತನಿಖೆಗೆ ಮುಂದಾದ ಕೂಡಲೇ ಕಾರ್ಕಳದಲ್ಲಿ ಸಾಮೂಹಿಕ ಅತ್ಯಾಚಾರದ ಪ್ರಕರಣವೊಂದು ಸಂಚಲನ ಉಂಟುಮಾಡಲು ಕಾರಣವೇನು…?.

ರಾಜಸ್ಥಾನದಲ್ಲಿ ಈ ಹಿಂದೆ ಇಸ್ಲಾಂ ಧರ್ಮದ ಕುರಿತು ಕೆಟ್ಟದಾಗಿ ಕಾಮೆಂಟ್ ಮಾಡಿದ ದರ್ಜಿಯೊಬ್ಬರನ್ನು ಹತ್ಯೆಗೈದ ಕುರಿತಾದ ಘಟನೆ ನಡೆದಿದ್ದು ಪತಾಕಿಗಳನ್ನು ಬಂಧಿಸಿದ ಬಳಿಕ ಪಾತಕಿಗಳು R.S.S ನ ಮುಸ್ಲಿಂ ಮಂಚ್ ಎಂಬ ಸಂಘಟನೆಯ ಸದಸ್ಯರು ಹಾಗೂ ಭಾಜಪದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರೆಂಬ ಸತ್ಯ ಹೊರಬಂದವು ಅದೇ ರೀತಿ ಈ ಪ್ರಕರಣದಲ್ಲಿ ಭಾಗಿಯಾದವರಿಗೆ ಸಂಘಪರಿವಾರದ ಮುಸ್ಲಿಂ ಮಂಚ್ ನ ಸಂಪರ್ಕ ಇದೆಯೇ..?

ಅವರು ಭಾಜಪದೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದರೇ ಪ್ರಧಾನ ಆರೋಪಿ ಅಲ್ತಾಫ್ ಗೆ ಡ್ರಗ್ಸ್ ಸರಬರಾಜು ಮಾಡಿದ ಆರೋಪಿ ಅಭಯ್ ಗೆ ಡ್ರಗ್ಸ್ ಎಲ್ಲಿಂದ ಬಂತು ಆತ ಯಾವುದಾದರೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದೇನೇ ಅಭಯ್ ಗೆ ಡ್ರಗ್ಸ್ ಸರಬರಾಜಿನ ಮೂಲ ಯಾವುದು ಎಂಬುದು ಜನತೆಗೆ ತಿಳಿಯಬೇಕಾದರೆ ತನಿಖೆಯನ್ನು ಬೇರು ಮಟ್ಟದಿಂದ ಮಾಡಬೇಕಾಗುತ್ತದೆ.

-ಅನಿತಾ ಡಿಸೋಜ, ಅಧ್ಯಕ್ಷರು ಬ್ಲಾಕ್ ಮಹಿಳಾ ಕಾಂಗ್ರೆಸ್, ಕಾರ್ಕಳ.

ಜಾಹೀರಾತು    

NO COMMENTS

LEAVE A REPLY

Please enter your comment!
Please enter your name here