ಕಾರ್ಕಳ:ತೆಳ್ಳಾರು ಸಂಕದ ಬಳಿ ಬಾವಿಗೆ ಬಿದ್ದ ಹೋರಿ:ಅಗ್ನಿಶಾಮಕ ದಳದ ಸಿಬ್ಬಂದಿ-ಸ್ಥಳೀಯರಿಂದ ರಕ್ಷಣೆ

0

ದುರ್ಗಾ ಪಂಚಾಯತ್ ವ್ಯಾಪ್ತಿಯ ತೆಳ್ಳಾರು ಸಂಕದ ಬಳಿಯ ಸುಮಾರು 30 ಅಡಿ ಆಳದ ನೀರು ತುಂಬಿರುವ ಬಾವಿಯೊಂದಕ್ಕೆ ಹೋರಿಯೊಂದು ಬಿದ್ದ ಘಟನೆ ಇಂದು ಸಂಜೆ 6-00 ಗಂಟೆ ಸುಮಾರಿಗೆ ನಡೆದಿದೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಶ್ರೀ ಲಕ್ಷ್ಮೀ ಗೆಳೆಯರ ಬಳಗದ ಸದಸ್ಯರಾದ ಮಂಜು, ಪವನ್ ಆಚಾರ್ಯ ಮಂದಾರ, ಯೋಗೇಂದ್ರ ಪುಜಾರಿ ಕಾವೇರಡ್ಕ, ದೀಪಕ್ ನಾಯ್ಕ್, ಗೋವರ್ಧನ್ ನಾಯ್ಕ್, ಲಾಯ್ಡ್, ಕೀರ್ತನ್ ಶೆಟ್ಟಿ ಪಲಾಯಿ ಬಾಕ್ಯಾರ್, ಚೇತು ಕಾವೇರಡ್ಕ ಮತ್ತಿತರು ಸೇರಿ ಹೋರಿಗೆ ಹಾನಿಯಾಗದಂತೆ ಕ್ರಮ ಕೈಗೊಂಡರು.

ದುರ್ಗಾ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಹೇಶ್ ರಾವ್ ಸ್ಥಳಕ್ಕೆ ಆಗಮಿಸಿ ಕಾರ್ಕಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಕೂಡಲೇ ಕೇವಲ ಹದಿನೈದು ನಿಮಿಷಗಳ ಒಳಗೆ ಧಾವಿಸಿ ಬಂದ ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿಯವರು ಬೃಹತ್ ಹೋರಿಯನ್ನು ಬಾವಿಯಿಂದ ಮೇಲೆ ತೆಗೆದು ಅದರ ರಕ್ಷಣೆ ಮಾಡಿದರು.

ಕಾರ್ಕಳ ಅಗ್ನಿಶಾಮಕ ದಳದ ತುರ್ತು ಸ್ಪಂದನೆಗೆ ಹಾಗೂ ಶ್ರೀ ಲಕ್ಷ್ಮೀ ಗೆಳೆಯರ ಬಳಗದ ಪವನ್ ಆಚಾರ್ಯ ಮಂದಾರ ಯೋಗೇಂದ್ರ ಪುಜಾರಿ ಕಾವೇರಡ್ಕ ಮತ್ತು ಮಂಜು ಇವರ ಸಾಹಸಮಯ ಕಾರ್ಯಕ್ಕೆ ಊರಿನವರ ಮುಕ್ತ ಕಂಠದ ಶ್ಲಾಘನೆ ವ್ಯಕ್ತವಾಗಿದೆ.

ರಮೇಶ್ ಶೆಟ್ಟಿ ಅಯೋದ್ಯಾ ನಗರ ರಾಜೇಂದ್ರ ಅಮೀನ್ ಗುಡ್ಡೆಯಂಗಡಿ ಇವರು ಸಹಕರಿಸಿದರು.

   

LEAVE A REPLY

Please enter your comment!
Please enter your name here