Thursday, April 16, 2026
Google search engine
Homeಕಾರ್ಕಳಸಮಾಜ ಹಿತಕ್ಕಿಂತ ಕಾಂಗ್ರೆಸ್ ಓಲೈಕೆಯೇ ಅಣ್ಷಪ್ಪ ನಕ್ರೆ, ರಾಘವ ಕುಕ್ಜುಜೆ ಯವರಿಗೆ ಮುಖ್ಯವಾಯಿತೇ? ಸಮುದಾಯದಕ್ಕೆ...

ಸಮಾಜ ಹಿತಕ್ಕಿಂತ ಕಾಂಗ್ರೆಸ್ ಓಲೈಕೆಯೇ ಅಣ್ಷಪ್ಪ ನಕ್ರೆ, ರಾಘವ ಕುಕ್ಜುಜೆ ಯವರಿಗೆ ಮುಖ್ಯವಾಯಿತೇ? ಸಮುದಾಯದಕ್ಕೆ ಮೀಸಲಿಟ್ಟ ಹಣ ದುರ್ಬಳಕೆ ಆದಾಗ ಸೊಲ್ಲೆತ್ತಲಿಲ್ಲ ಯಾಕೆ?, ಸಮುದಾಯದ ತಾ.ಪಂ ಮಾಜಿ ಅಧ್ಯಕ್ಷ ಸುಂದರ್ ಬಿ. ಮತ್ತು ಸಂಜೀವ ಮಾಳ ತಿರುಗೇಟು

ಅಣ್ಣಪ್ಪ ನಕ್ರೆ ಮತ್ತು ವಕೀಲ ರಾಘವ ಕುಕ್ಕುಜೆ ಅವರು ಇಂದು ಕಾಂಗ್ರೆಸ್ ಪ್ರೇರಣೆಯಿಂದ ಸಮಾಜದಲ್ಲಿ ವಿಷ ಬಿತ್ತಲು ಹೊರಟಿರುವುದು ಸರಿಯಲ್ಲ ಎಂದು ತಾ.ಪಂ. ಮಾಜಿ ಅಧ್ಯಕ್ಷ ಸುಂದರ್ ಬಿ. ಮತ್ತು ಮುಖಂಡರಾದ ಸಂಜೀವ ಮಾಳ ಜಂಟಿ ಹೇಳಿಕೆಯಲ್ಲಿ ಗುಡುಗಿದ್ದಾರೆ.

ಅಣ್ಣಪ್ಪ ನಕ್ರೆ ಮತ್ತು ರಾಘವ ಕುಕ್ಕುಜೆ ಅವರ ರಾಜಕೀಯ ಪ್ರೇರಿತ ಹೇಳಿಕೆಗಳಿಗೆ ತಿರುಗೇಟು ನೀಡಿದ ಅವರು ಕಾರ್ಕಳಕ್ಕೆ ಭವನದ ಕೊಡುಗೆ ಕೊಟ್ಟವರು ಶಾಸಕ ಸುನಿಲ್ ಕುಮಾರ್, ಕಾರ್ಕಳದ ಇತಿಹಾಸದಲ್ಲೇ ಅದರಲ್ಲೂ ತಾಲೂಕು ಮಟ್ಟದಲ್ಲಿ ಎಲ್ಲೂ ಇಲ್ಲದ ಇಷ್ಟು ಭವ್ಯವಾದ ಅಂಬೇಡ್ಕರ್ ಭವನ ನಿರ್ಮಾಣವಾಗಿದ್ದು ಶಾಸಕ ವಿ. ಸುನಿಲ್ ಕುಮಾರ್ ಅವರ ಇಚ್ಛಾಶಕ್ತಿಯಿಂದ. ಅಭಿವೃದ್ಧಿಯ ಸಾಕ್ಷಿಯಾಗಿ ನಿಂತಿರುವ ಆ ಭವನವನ್ನು ನೋಡಿಯೂ ಸುಳ್ಳು ಹೇಳುತ್ತಿರುವ ‘ಮೊಸರಲ್ಲಿ ಕಲ್ಲು ಹುಡುಕುವ’ ನಿಮ್ಮ ಬುದ್ಧಿಯನ್ನು ನಮ್ಮ ಸಮಾಜ ಗಮನಿಸುತ್ತಿದೆ.

ಸಮುದಾಯಕ್ಕೆ ಮೀಸಲಿಟ್ಟ ಕೋಟ್ಯಾಂತರ ರೂಪಾಯಿ ಹಣವನ್ನು ಕಾಂಗ್ರೆಸ್ ಸರಕಾರ ದುರ್ಬಳಕೆ ಮಾಡಿದಾಗ ಯಾಕೆ ಧ್ವನಿ ಎತ್ತಲಿಲ್ಲ..?

ಭವ್ಯವಾದ ಅಂಬೇಡ್ಕರ್‌ ಭವನವನ್ನು ಕಡೆಗಣಿಸಿ ಯಾವುದೇ ಸಭಾ ಕಾರ್ಯಕ್ರಮ ನಡೆಸದೇ ಉದ್ಘಾಟನೆ ಮಾಡಿರುವುದು ಕಾಂಗ್ರೆಸ್‌ ಸರ್ಕಾರ ಸಮಾಜಕ್ಕೆ ಮಾಡಿದ ಅವಮಾನವಲ್ಲವೆ..?

ಕಾಮಗಾರಿ ಸಂಪೂರ್ಣವಾಗದೇ ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲದೆ ಭವನವನ್ನು ಉಧ್ಘಾಟನೆ ಮಾಡಿರುವುದು ಯಾವ ಉದ್ದೇಶಕ್ಕೆ ಎಂದು ಈವರೆಗೆ ಯಾಕೆ ಕೇಳಲಿಲ್ಲ..?

ಕಳೆದ ಎರಡು ವರ್ಷಗಳಿಂದ ಅಂಬೇಡ್ಕರ್‌ ಭವನದದ ಕನಿಷ್ಠ ಮೂಲಭೂತ ಸೌಕರ್ಯದ ಅನುದಾನಕ್ಕಾಗಿ ಮಾನ್ಯ ಶಾಸಕರು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಈ ಕುರಿತು ನಿಮ್ಮ ನಿಲುವೇನು..? ನಿಮ್ಮ ಪ್ರಯತ್ನವೇನು..?

ಕ್ಷೇತ್ರದ ಸತ್ಯಸಾರಮಣಿ ಮುಗ್ಗೇರ್ಕಳ ದೈವಸ್ಥಾನಗಳ ಜಾಗದ ರೆಕಾರ್ಡಗಳನ್ನು ಸರಿ ಮಾಡಲು ಶಾಸಕರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇದರ ಕುರಿತು ನಿಮ್ಮ ಧ್ವನಿ ಯಾಕೆ ಹೊರ ಬರಲಿಲ್ಲ..?

ಅದೆಲ್ಲ ಬಿಡೋಣ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಿ ಭಾಗವಹಿಸಿದ್ದಾರೆ ಎಂಬುವುದನ್ನು ಯಾಕೆ ಕೇಳಲಿಲ್ಲ..?

ಈ ಎಲ್ಲಾ ವಿಚಾರಗಳನ್ನು ಕಂಡು ಕಾಣದಂತೆ ವರ್ತಿಸುವ ನೀವು ಈಗ ರಾಜಕೀಯ ಪ್ರೇರಣೆಯಿಂದ ಹೇಳಿಕೆ ನೀಡುತ್ತಿದ್ದೀರಿ. ಇದರ ಬದಲು ಸಮುದಾಯದ ಶ್ರೇಯೋಭಿವೃದ್ದಿಗೆ ಶ್ರಮಿಸಿ.

ಅಂಬೇಡ್ಕರ್ ಭಕ್ತಿ ಬಿಜೆಪಿಯ ರಕ್ತದಲ್ಲಿದೆ: ಬಿಜೆಪಿ ಕೇವಲ ಭಾಷಣದ ಪಕ್ಷವಲ್ಲ. ಪ್ರತಿ ಕಾಲೋನಿಗಳಲ್ಲೂ ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ, ಬಾಬಾಸಾಹೇಬರ ತತ್ತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುತ್ತಿರುವುದು ನಮ್ಮ ಕಾರ್ಯಕರ್ತರು. ಬಿಜೆಪಿಯ ತಳಮಟ್ಟದ ಕಾರ್ಯಕರ್ತನ ಎದೆಯಲ್ಲೂ ಅಂಬೇಡ್ಕರ್ ಬಗ್ಗೆ ಅಪಾರ ಭಕ್ತಿಯಿದೆ. ನಮಗೆ ನಿಮ್ಮಂತಹವರಿಂದ ಪಾಠ ಕಲಿಯುವ ಅಗತ್ಯವಿಲ್ಲ.

ಸಮಾಜದ ಹೆಸರಲ್ಲಿ ರಾಜಕೀಯ ಬೇಳೆ ಬೇಯಿಸಬೇಡಿ. ಕಾಂಗ್ರೆಸ್ಸಿನ ಕೈಗೊಂಬೆಗಳಂತೆ ವರ್ತಿಸುತ್ತಿರುವ ಅಣ್ಣಪ್ಪ ನಕ್ರೆ ಮತ್ತು ರಾಘವ ಕುಕ್ಕುಜೆ ಸಮಾಜದ ಹಿತಕ್ಕಿಂತ ರಾಜಕೀಯ ಲಾಭವನ್ನೇ ದೊಡ್ಡದಾಗಿ ಕಂಡಿದ್ದಾರೆ. ಮಾಡಿದ ಒಳ್ಳೆಯ ಕೆಲಸವನ್ನು ಮುಕ್ತವಾಗಿ ಶ್ಲಾಘಿಸುವುದು ಧರ್ಮ. ಅದು ಬಿಟ್ಟು ಸುಳ್ಳು ಆರೋಪ ಮಾಡಿ ಗೊಂದಲ ಮೂಡಿಸಲು ಪ್ರಯತ್ನಿಸಿದರೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಅಭಿವೃದ್ಧಿ ಪಥಕ್ಕೆ ಅಡ್ಡಗಾಲು ಹಾಕುವ ನಿಮ್ಮ ಈ ನಾಟಕಗಳು ಸತ್ಯದ ಮುಂದೆ ಹೆಚ್ಚು ಕಾಲ ನಡೆಯುವುದಿಲ್ಲ. ಸುನಿಲ್ ಕುಮಾರ್ ಅವರ ಶ್ರಮವನ್ನು ಕಡೆಗಣಿಸಿ ಸಮಾಜದ ಹಾದಿ ತಪ್ಪಿಸುವ ಇಂತಹ ಕೃತ್ಯಗಳನ್ನು ನಾವು ಇನ್ನು ಮುಂದೆ ಸಹಿಸುವುದಿಲ್ಲ. ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಮಾಜವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಬೇಡಿ,” ಎಂದು ಮುಖಂಡರು ನೇರ ಎಚ್ಚರಿಕೆ ನೀಡಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments