Thursday, June 18, 2026
Google search engine
Homeಕಾರ್ಕಳಕಾರ್ಕಳ: ಅಂಬೇಡ್ಕರ್‌ಭವನ ಸಮಿತಿ ಸದಸ್ಯರ ನೇಮಕಕ್ಕೆ ಆಕ್ಷೇಪ

ಕಾರ್ಕಳ: ಅಂಬೇಡ್ಕರ್‌ಭವನ ಸಮಿತಿ ಸದಸ್ಯರ ನೇಮಕಕ್ಕೆ ಆಕ್ಷೇಪ

ತಾಲೂಕು ಅಂಬೇಡ್ಕ‌ರ್ ಭವನಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮೂವರು ನಾಮನಿರ್ದೇಶಿತ ಸದಸ್ಯರನ್ನು ಅನಧಿಕೃತವಾಗಿ ಆಯ್ಕೆ ಮಾಡಿದ್ದಾರೆ, ಎಂದು ದಲಿತ ಸಮುದಾಯದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಪತ್ರಿಕಾ ಭವನದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮುಖಂಡ ಮಾತನಾಡಿ, ಸುಧಾಕರ್‌ ದಾನಶಾಲೆ ಮೇ 4 ರಂದು ನಿಗದಿಯಾಗಿದ್ದ ಸಭೆಯನ್ನು ರದ್ದು ಗೊಳಿಸಿದ್ದ ಅಧಿಕಾರಿಗಳು, ತಾಲೂಕಿನ 7 ಪ್ರಮುಖ ದಲಿತ ಸಂಘಟನೆಗಳ ಗಮನಕ್ಕೆ ತರದೆ ರಹಸ್ಯವಾಗಿ 3 ಮಂದಿಯನ್ನು ಆಯ್ಕೆ ಮಾಡಿದ್ದಾರೆ. ಈ ಏಕಪಕ್ಷೀಯ ಆಯ್ಕೆಯನ್ನು ಜಿಲ್ಲಾಧಿಕಾರಿಗಳು ತತ್ ಕ್ಷಣ ರದ್ದುಪಡಿಸಬೇಕು. ಪುನಃ ಸಭೆ ನಡೆಸಿ ಒಮ್ಮತದಿಂದ ಹೊಸ ಸದಸ್ಯರನ್ನು ಆಯ್ಕೆ ಮಾಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳು ತತ್‌ಕ್ಷಣ ಸ್ಪಂದಿಸಿ ಕ್ರಮವಹಿಸಬೇಕು. ಈ ಪ್ರಕ್ರಿಯೆ ನಡೆಯದಿದ್ದಲ್ಲಿ ತಾಲೂಕಿನಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದಲಿತ ಪ್ರಮುಖರಾದ ಸಂಘಟನೆಗಳ ಶ್ರೀನಿವಾಸ್ ಕಾರ್ಲ, ಸುನಿತಾ ಅಂಡಾರು, ಗೋವರ್ಧನ್ ಕಾರ್ಕಳ ಹಾಗೂ ಹರೀಶ್ ಬಜಗೋಳಿ ಉಪಸ್ಥಿತರಿದ್ದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments