ಮಳೆಗಾಲದ ಮುನ್ನೆಚ್ಚರಿಕೆಯ ಕ್ರಮವಾಗಿ ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣ ಕೂಡ್ಲು ಫಾಲ್ಸ್ ಪ್ರವೇಶಕ್ಕೆ ಅರಣ್ಯ ಇಲಾಖೆಯು ನಿಷೇಧ ಮಾಡಿ ಆದೇಶ ಹೊರಡಿಸಿದೆ. ಪ್ರಖ್ಯಾತ ಕೂಡ್ಲು ಫಾಲ್ಸ್ ರಾಜ್ಯದಾದ್ಯಂತದ ಹೆಚ್ಚು ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ. ಮಳೆ ಹಿನ್ನಲೆಯಲ್ಲಿ ನೀರಿನ ಒತ್ತಡದಿಂದ ಅಪಾಯವಿರುವ ಹಿನ್ನಲೆಯಲ್ಲಿ ಅವಘಡಗಳನ್ನು ತಪ್ಪಿಸುವುದು, ಸುಂದರ ಪ್ರವಾಸಿತಾಣವಾದರೂ ಅಪಾಯವಿರುವುದರಿಂದ ಪ್ರವಾಸಿಗರ ಜೀವರಕ್ಷಣೆಯ ಪ್ರಮುಖ ಕಾರಣದಿಂದ ಕೂಡ್ಲು ಫಾಲ್ಸ್ ಪ್ರವೇಶಕ್ಕೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ.




















