ಕಾರ್ಕಳ:ಅ.16-ಬೆಳಿಗ್ಗೆ 10 ಗಂಟೆಯಿಂದ ಸಂಜೆ 7ರ ತನಕ ಕಾರ್ಕಳ ಬಸ್ ನಿಲ್ದಾಣದಲ್ಲಿರತನ್ ಟಾಟಾರವರಿಗೆ ಶೃದ್ದಾಂಜಲಿ ಸಭೆ

0

ಕಾರ್ಕಳ:ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 7-00ರ ತನಕ ಕಾರ್ಕಳ ಬಸ್ ನಿಲ್ದಾಣದಲ್ಲಿರತನ್ ಟಾಟಾರವರಿಗೆ ಶೃದ್ದಾಂಜಲಿ ಸಭೆ

ಪದ್ಮವಿಭೂಷಣ, ಮಹಾ ಮಾನವತಾವಾದಿ ಶ್ರೀ ರತನ್ ಟಾಟಾ ಅವರಿಗೆ ಸಾರ್ವಜನಿಕ ಶೃದ್ದಾಂಜಲಿ ಸಭೆಯನ್ನು ಬುಧವಾರ ದಿನಾಂಕ 16 – 10 -2024ರಂದು ಕಾರ್ಕಳ ಬಸ್ ನಿಲ್ದಾಣದಲ್ಲಿ ಅಭಿನವ ಭಾರತ ಸೊಸೈಟಿ ಆಯೋಜಿಸಿದೆ.

ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ ದೇಶದ ಅಗ್ರಗಣ್ಯ ಕೈಗಾರಿಕೋದ್ಯಮಿ,ದೇಶದ ಅಭಿವೃದ್ಧಿಗೆ ವಿಶಿಷ್ಟ ಕೊಡುಗೆ ನೀಡಿದ ದೇಶಭಕ್ತ ಉದ್ಯಮಿ,ದೇಶದ ಜನರ ಸಮಸ್ಯೆಗೆ ಸದಾ ಮಿಡಿದ ಮಹಾ ಮಾನವತಾವಾದಿ,
ದೇಶದ ಸಂಕಷ್ಟಕ್ಕೆ ಅವಿರತ ಸ್ಪಂದಿಸಿದ ಲೋಕೋಪಕಾರಿ,ಭಾರತ ಮಾತೆಯ ಹೆಮ್ಮೆಯ ಸುಪುತ್ರ, ದೇಶ ಭಕ್ತರ ಪ್ರೀತಿಯ ರತನ್ ಟಾಟಾರವರು ಸ್ವರ್ಗಸ್ಥರಾಗಿದ್ದು ಅವರ ಅದ್ವಿತೀಯ ಸಾಧನೆ, ಅಪ್ರತಿಮ ದೇಶಭಕ್ತಿಯನ್ನು ಮೆಲುಕು ಹಾಕುತ್ತಾ ಅವರಿಗೆ ಭಾವಪೂರ್ಣ ಶೃದ್ದಾಂಜಲಿ ಸಲ್ಲಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜನೆಯಾಗಿದೆ.

ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 7-00ರ ತನಕ ಕಾರ್ಕಳ ಬಸ್ ನಿಲ್ದಾಣದಲ್ಲಿ ಪದ್ಮವಿಭೂಷಣ ಶ್ರೀ ರತನ್ ಟಾಟಾರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲು ಕಾರ್ಕಳದ ದೇಶಭಕ್ತ ನಾಗರೀಕರ ಬಂಧು ಬಗಿನಿಯರಿಗೆ ಅವಕಾಶ ಇದೆ ಎಂದು ಆಯೋಜಕರು ತಿಳಿಸಿದ್ದಾರೆ.

   

LEAVE A REPLY

Please enter your comment!
Please enter your name here