ಅಂದು ಜನರ ಅನುಕೂಲಕ್ಕಾಗಿ ಹೆಬ್ರಿ ತಾಲ್ಲೂಕು ಆಗಬೇಕು, ತಾಲ್ಲೂಕು ಆದರೆ ಹತ್ತಿರದಲ್ಲಿ ಜನರ ಕೆಲಸಗಳು ಆಗುತ್ತವೆ ಎಂದು ಭಾವಿಸಿದ್ದೇವು. ಆದರೆ ಈಗ ಸಿಬ್ಬಂದಿ ಕೊರತೆಯಿಂದ ಜನರ ಕೆಲಸಗಳು ಆಗದೆ ಸಾರ್ವಜನಿಕರು ಸಮಸ್ಯೆ ಎದುರಿಸಬೇಕಾಗಿದೆ, ತಾಲ್ಲೂಕು ಕಚೇರಿಯ ಸಿಬ್ಬಂದಿ ಕೊರತೆಯನ್ನು ನಿವಾರಿಸಿ ಎಂದು ಹೆಬ್ರಿ ತಾಲ್ಲೂಕು ರಚನಾ ಹೋರಾಟ ಸಮಿತಿಯ ಸಂಚಾಲಕರಾಗಿದ್ದ ಹೆಬ್ರಿಯ ಧಾರ್ಮಿಕ ಮುಖಂಡ ಭಾಸ್ಕರ ಜೋಯಿಸ್ ಅವರು ಮಂಗಳವಾರ ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರಿಗೆ ಹೆಬ್ರಿಯಲ್ಲಿ ಮನವಿ ಮಾಡಿದರು.


















