ಎಸ್.ಎನ್.ವಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿನ ಮತ್ತು ಗುರು ಪೂರ್ಣಿಮೆಯನ್ನು ಜು.30 ರಂದು ಆಚರಿಸಲಾಯಿತು.
ಅತಿಥಿಯಾಗಿ ಶಾಲಾ ಆಡಳಿತ ಮಂಡಳಿಯ ಸದಸ್ಯರು ಹಾಗೂ ನಿವೃತ್ತ ಮುಖ್ಯ ಶಿಕ್ಷಕರಾದಂತಹ ಶ್ರೀ ಜಗದೀಶ ಹೆಗ್ಡೆ ಅವರು ಭಾಗವಹಿಸಿದ್ದರು. ಶ್ರೀಯುತರು ಮಕ್ಕಳಿಗೆ ಗುರು ಪೂರ್ಣಿಮೆಯ ಮಹತ್ವವನ್ನು ತಿಳಿಸಿದರು. ವಿದ್ಯೆಯ ಜೊತೆಗೆ ವಿನಯ, ಸಂಸ್ಕೃತಿ, ಪ್ರಾಮಾಣಿಕತೆಯನ್ನು ಬೆಳೆಸಿಕೊಳ್ಳಬೇಕು, ನಮ್ಮನ್ನು ಹೆತ್ತು , ಸಾಕಿ ಸಲಹಿದ ತಂದೆ ತಾಯಿಗೆ ಗೌರವ ನೀಡಬೇಕು. ಅವರ ಕೆಲಸಗಳಲ್ಲಿ ಸಹಾಯ ಮಾಡಬೇಕು, ತಂದೆ ತಾಯಿಯವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕೆಂದರು. ನಮ್ಮ ಜೀವನದಲ್ಲಿ ಗುರುವಿನ ಸ್ಥಾನ ಬಹಳ ಮುಖ್ಯವಾಗಿದೆ, ವಿದ್ಯೆ ಕಲಿಸಿದ ಗುರುವನ್ನು ಸದಾ ಗೌರವದಿಂದ ನೋಡಬೇಕು,ಅವರಿಗೆ ನಾವು ಋಣಿಯಾಗಿರಬೇಕು ಮತ್ತು ಗುರು ಹಿರಿಯರನ್ನು ಗೌರವದಿಂದ ನೋಡಬೇಕೆಂದರು.
ಹಾಗೆಯೆ ನಮ್ಮ ದೇಶದ ರಕ್ಷಣೆಗೆ ಪಣ ತೊಟ್ಟಿರುವ ಸೈನಿಕರನ್ನು ನಾವು ಗೌರವಿಸಬೇಕೆಂದು ತಿಳಿಸಿದರು. ಮಕ್ಕಳಿಗೆ ಕಥೆಯೊಂದಿಗೆ , ನಿದರ್ಶನಗಳೊಂದಿಗೆ ವಿವರಿಸಿದರು.ಅಲ್ಲದೆ ಮಕ್ಕಳಿಗೆ ನೃತ್ಯ ಮಾಡಿಸಿ ತಾವು ಕೂಡ ನೃತ್ಯವನ್ನು ಮಾಡಿ ಮಕ್ಕಳನ್ನು ಖುಷಿ ಪಡಿಸಿದರು.
ನಮ್ಮ ಶಾಲೆಯ ವಿದ್ಯಾರ್ಥಿಗಳಾದ ಗಹನ್ ಭಟ್ ಮತ್ತು ಖುಷಿ ಶೆಟ್ಟಿ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಶರ್ಮಿಳಾ ಹೆಗ್ಡೆಯವರು ಸ್ವಾಗತಿಸಿದರು. ಸಹ ಶಿಕ್ಷಕಿ ವೀಣಾ ಸಿ ನಾಯಕ್ರವರು ಧನ್ಯವಾದವನ್ನಿತ್ತರು. ಕಾರ್ಯಕ್ರಮದಲ್ಲಿ ಹಿರಿಯ ಸಹಶಿಕ್ಷಕಿ ಶರ್ಮಿಳಾ ಕೆ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಸಹ ಶಿಕ್ಷಕಿ ರಶ್ಮಿ ವಿ ಕೋಟ್ಯಾನ್ ನೆರವೇರಿಸಿದರು.






















