ಕಾರ್ಕಳ ಯಕ್ಷಕಲಾರಂಗದ ಕಿಶೋರ ಯಕ್ಷೋತ್ಸವ ಉದ್ಘಾಟನೆ
ಕಾರ್ಕಳ: ಕಾರ್ಕಳ ಯಕ್ಷ ಕಲಾರಂಗದ ವತಿಯಿಂದ ತಾಲೂಕಿನ ವಿವಿಧ ಶಾಲಾ ಕಾಲೇಜುಗಳ ಆಸಕ್ತಿಯ ವಿಧ್ಯಾರ್ಥಿಗಳಿಗೆ ಉಚಿತವಾಗಿ ಯಕ್ಷ ಶಿಕ್ಷಣ ನೀಡಿ ವರ್ಷಾಂತ್ಯದಲ್ಲಿ ನಡೆಸುವ ಕಿಶೋರ ಯಕ್ಷೊತ್ಸವವು ನಿನ್ನೆ ಉದ್ಘಾಟನೆ ಗೊಂಡಿತು.
ಕಾರ್ಕಳದ ಪ್ರತಿಷ್ಟಿತ ಸಮಾಜ ಸೇವಕ,ಕಲಾಪೋಷಕ ಸಿ.ಎ. ಕಮಲಾಕ್ಷ ಕಾಮತ್ ಯಕ್ಷೋತ್ಸವ ಉದ್ಘಾಟಿಸಿ ತಲೆ ತಲಾಂತರದಿಂದ ಹಿರಿಯ ಕಲಾವಿದರು ಉಳಿಸಿ ಬೆಳೆಸಿದ ನಮ್ಮ ಆರಾಧನಾ ಕಲೆಯನ್ನು ನಾವೂ ಉಳಿಸುವ ಪ್ರಯತ್ನ ಮಾಡಬೇಕು .ಮಕ್ಕಳಲ್ಲಿ ವಿದ್ಯೆಯ ಜೊತೆ ಆತ್ಮ ಸ್ತೈರ್ಯ ತುಂಬುವ ಭಾರತೀಯ ರಂಗ ಕಲೆಗಳ ಬಗ್ಗೆ ತರಬೇತಿ ಕೊಟ್ಟು ಸಂಸ್ಕಾರವಂತರಾಗಿಸುವುದು ನಮ್ಮ ಕರ್ತವ್ಯ ಎಂದರು.
ಸಂಸ್ಥೆಯ ಅದ್ಯಕ್ಷ ವಿಜಯ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಕಾರ್ಕಳದ ವೇ.ಮೂ.ನಾರಾಯಣ ಭಟ್ ರವರು ಶುಭಾಸಂಸನೆಗೈದರು.ಪ್ರಧಾನ ಅತಿಥಿಗಳಾಗಿ ಯಕ್ಷಧ್ರುವ ಯಕ್ಷ ಶಿಕ್ಷಣದ ಸಂಚಾಲಕ ಪಣಂಬೂರು ವಾಸುದೇವ ಐತಾಳ್ ಹಾಗೂ ಅತಿಥಿಗಳಾಗಿ ಅರಿವಳಿಕೆ ತಜ್ಞ ಡಾ. ಜ್ಞಾನೇಶ್ ಕಾಮತ್, , ಪೆರ್ವಾಜೆ ಹೈಸ್ಕೂಲ್ ನ ಶಾಲಾಭಿವೃದ್ದಿ ಸಮಿತಿಯ ಅದ್ಯಕ್ಷ ಆನಂದ್ರಾಯ ನಾಯಕ್, ಮುಖ್ಯ ಶಿಕ್ಷಕರಾದ ದಿವಾಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಸಂಚಾಲಕ ಪ್ರೊ. ಪದ್ಮನಾಭ ಗೌಡ ಸ್ವಾಗತಿಸಿದರು. ಪ್ರೊ. ಕೃಷ್ಣ ಭಟ್ ವಂದಿಸಿದರು.
ಕಲಾವಿದ ಕಾರ್ಯದರ್ಶಿ ಮಹಾವೀರ ಪಾಂಡಿ ಕಾರ್ಯಕ್ರಮ ನಿರೂಪಿಸಿದರು.ನಂತರ ಕಾಂತಾವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ರಾಮಾಂಜನೇಯ ಯಕ್ಷಗಾನ ಪ್ರದರ್ಶನ ಆರಂಭವಾಯಿತು.