Friday, March 14, 2025
Google search engine
Homeಕಾರ್ಕಳಕ್ರೀಡಾ ಚಟುವಟಿಕೆಯ ಅವಕಾಶ ನಿರಾಕರಿಸದಿರಿ:ಬೋಳ ಪ್ರಶಾಂತ್ ಕಾಮತ್

ಕ್ರೀಡಾ ಚಟುವಟಿಕೆಯ ಅವಕಾಶ ನಿರಾಕರಿಸದಿರಿ:ಬೋಳ ಪ್ರಶಾಂತ್ ಕಾಮತ್

ಕ್ರೀಡಾ ಚಟುವಟಿಕೆಯ ಅವಕಾಶ ನಿರಾಕರಿಸದಿರಿ:ಬೋಳ ಪ್ರಶಾಂತ್ ಕಾಮತ್

ಕಾರ್ಕಳ: ಚೇತೋಹಾರಿ ಬದುಕಿಗೆ ಕ್ರೀಡೆ ಅತ್ಯುತ್ತಮ ಸಾಧನ. ಸಾಮುದಾಯಿಕವಾಗಿ , ವೈಯಕ್ತಿಕವಾಗಿ ಮತ್ತು ಮನುಷ್ಯನ ಸಂಘಟನಾತ್ಮಕ ಚಟುವಟಿಕೆಗೆ ಕ್ರೀಡೆ ಶ್ರೇಷ್ಠ ಮಾಧ್ಯಮವಾಗಿ ಪರಿಣಮಿಸಬಲ್ಲುದು.ಕ್ರೀಡೆಯಿಂದ ವ್ಯಾಯಾಮ, ಉತ್ತಮ ಆರೋಗ್ಯ,ಮಾನಸಿಕ ಸಮತೋಲನ ಲಭಿಸುವುದು ಸಾಧ್ಯ.ಈ ಹಿನ್ನಲೆಯಲ್ಲಿ ಯುವ ಸಮುದಾಯ ಕ್ರೀಡೆಯ ಅವಕಾಶಗಳನ್ನು ನಿರಾಕರಿಸಬಾರದು.ಸದಾ ಕ್ರಿಯಾಶೀಲರಾ ಗಿರಲು ಪ್ರಯತ್ನಿಸಬೇಕು ಎಂದು ಕಾರ್ಕಳ ಟೈಗರ್ಸ್ ಸಂಸ್ಥಾಪಕ,ಉದ್ಯಮಿ ಬೋಳ ಪ್ರಶಾಂತ್ ಕಾಮತ್ ಹೇಳಿದ್ದಾರೆ.

ಅವರು ಪಡುತಿರುಪತಿ ಕ್ರಿಕೆಟರ್ಸ್ ಸ್ವರಾಜ್ಯ ಮೈದಾನದಲ್ಲಿ ಆಯೋಜಿಸಿದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರ ಕ್ರಿಕೆಟ್ ಪಂದ್ಯಾಟದ ಬಹುಮಾನ ವಿತರಣೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು .
ಪಡುತಿರುಪತಿ ಕ್ರಿಕೆಟರ್ಸ್ ಗೌರವಾಧ್ಯಕ್ಷ ಬೋಳ ನಾಗರಾಜ ಕಾಮತ್ ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಲೆಕ್ಕ ಪರಿಶೋಧಕ ಕಾರ್ಕಳ ಕಮಲಾಕ್ಷ ಕಾಮತ್,ಉದ್ಯಮಿಗಳಾದ ಬೋಳ ರಘುರಾಮ ಕಾಮತ್, ರಘುವೀರ ಶೆಣೈ,ಗಣೇಶ್ ಕಾಮತ್,ಸುಬ್ರಾಯ ಬಾಳಿಗಾ,ಪಡುತಿರುಪತಿ ಕ್ರಿಕೆಟರ್ಸ್ ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಂದ್ಯಾಟದ ವಿಜೇತ ತಂಡ ಪಡುತಿರುಪತಿ ಕ್ರಿಕೆಟರ್ಸ್ ಟ್ರೋಫಿ ಮತ್ತು ನಗದು 20,777 ತನ್ನದಾಗಿಸಿಕೊಂಡಿತು . ವರದ ಪಾಂಡುರಂಗ ತಂಡ ರನ್ನರ್ ಅಪ್ ಟ್ರೋಫಿ ಮತ್ತು ನಗದು13777 ಪಡೆದುಕೊಂಡಿತು. ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರೆಂಜಾಳ ನಾರಾಯಣ ಶೆಣೈ ಕಾರ್ಯಕ್ರಮ ಸಂಯೋಜಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಕ್ರೀಡಾ ಚಟುವಟಿಕೆಯ ಅವಕಾಶ ನಿರಾಕರಿಸದಿರಿ:ಬೋಳ ಪ್ರಶಾಂತ್ ಕಾಮತ್

ಕ್ರೀಡಾ ಚಟುವಟಿಕೆಯ ಅವಕಾಶ ನಿರಾಕರಿಸದಿರಿ:ಬೋಳ ಪ್ರಶಾಂತ್ ಕಾಮತ್

ಕಾರ್ಕಳ: ಚೇತೋಹಾರಿ ಬದುಕಿಗೆ ಕ್ರೀಡೆ ಅತ್ಯುತ್ತಮ ಸಾಧನ. ಸಾಮುದಾಯಿಕವಾಗಿ , ವೈಯಕ್ತಿಕವಾಗಿ ಮತ್ತು ಮನುಷ್ಯನ ಸಂಘಟನಾತ್ಮಕ ಚಟುವಟಿಕೆಗೆ ಕ್ರೀಡೆ ಶ್ರೇಷ್ಠ ಮಾಧ್ಯಮವಾಗಿ ಪರಿಣಮಿಸಬಲ್ಲುದು.ಕ್ರೀಡೆಯಿಂದ ವ್ಯಾಯಾಮ, ಉತ್ತಮ ಆರೋಗ್ಯ,ಮಾನಸಿಕ ಸಮತೋಲನ ಲಭಿಸುವುದು ಸಾಧ್ಯ.ಈ ಹಿನ್ನಲೆಯಲ್ಲಿ ಯುವ ಸಮುದಾಯ ಕ್ರೀಡೆಯ ಅವಕಾಶಗಳನ್ನು ನಿರಾಕರಿಸಬಾರದು.ಸದಾ ಕ್ರಿಯಾಶೀಲರಾ ಗಿರಲು ಪ್ರಯತ್ನಿಸಬೇಕು ಎಂದು ಕಾರ್ಕಳ ಟೈಗರ್ಸ್ ಸಂಸ್ಥಾಪಕ,ಉದ್ಯಮಿ ಬೋಳ ಪ್ರಶಾಂತ್ ಕಾಮತ್ ಹೇಳಿದ್ದಾರೆ.

ಅವರು ಪಡುತಿರುಪತಿ ಕ್ರಿಕೆಟರ್ಸ್ ಸ್ವರಾಜ್ಯ ಮೈದಾನದಲ್ಲಿ ಆಯೋಜಿಸಿದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರ ಕ್ರಿಕೆಟ್ ಪಂದ್ಯಾಟದ ಬಹುಮಾನ ವಿತರಣೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು .
ಪಡುತಿರುಪತಿ ಕ್ರಿಕೆಟರ್ಸ್ ಗೌರವಾಧ್ಯಕ್ಷ ಬೋಳ ನಾಗರಾಜ ಕಾಮತ್ ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಲೆಕ್ಕ ಪರಿಶೋಧಕ ಕಾರ್ಕಳ ಕಮಲಾಕ್ಷ ಕಾಮತ್,ಉದ್ಯಮಿಗಳಾದ ಬೋಳ ರಘುರಾಮ ಕಾಮತ್, ರಘುವೀರ ಶೆಣೈ,ಗಣೇಶ್ ಕಾಮತ್,ಸುಬ್ರಾಯ ಬಾಳಿಗಾ,ಪಡುತಿರುಪತಿ ಕ್ರಿಕೆಟರ್ಸ್ ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಂದ್ಯಾಟದ ವಿಜೇತ ತಂಡ ಪಡುತಿರುಪತಿ ಕ್ರಿಕೆಟರ್ಸ್ ಟ್ರೋಫಿ ಮತ್ತು ನಗದು 20,777 ತನ್ನದಾಗಿಸಿಕೊಂಡಿತು . ವರದ ಪಾಂಡುರಂಗ ತಂಡ ರನ್ನರ್ ಅಪ್ ಟ್ರೋಫಿ ಮತ್ತು ನಗದು13777 ಪಡೆದುಕೊಂಡಿತು. ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರೆಂಜಾಳ ನಾರಾಯಣ ಶೆಣೈ ಕಾರ್ಯಕ್ರಮ ಸಂಯೋಜಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments