ಮುನಿಯಾಲಿನ ಭಾರತೀಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಸಂಜೀವಿನಿ ಫಾರ್ಮ್ ಮತ್ತು ಡೈರಿ ಗೋಧಾಮದಲ್ಲಿ ಶನಿವಾರ ರಾಷ್ಟೀಯ ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ( ಹೆಚ್ ಆರ್ ) ಮಂಗಳೂರು ಉಡುಪಿ ವಿಭಾಗದ ವತಿಯಿಂದ ಮೂಡಬಿದರೆ ಎಸ್ ಕೆಎಫ್ ಎಲಿಕ್ಸರ್ ಉದ್ಯಮ ಸಮೂಹದ ಸಹಯೋಗದಲ್ಲಿ ನಡೆದ ಮಾನವ ಸಂಪನ್ಮೂಲ ಉದ್ಯೋಗಿಗಳ 1 ದಿನದ ವಿಶೇಷ ಕಾರ್ಯಗಾರವನ್ನು ಮುನಿಯಾಲು ಗೋಧಾಮದ ಸಂಸ್ಥಾಪಕ ಡಾ.ಜಿ.ರಾಮಕೃಷ್ಣ ಆಚಾರ್ ಉದ್ಘಾಟಿಸಿದರು.
ಮುನಿಯಾಲು ಗೋಧಾಮದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಉದ್ಯೋಗಿಗಳ ವಿಶೇಷ ಕಾರ್ಯಗಾರ.
ಮಾನವ ಸಂಪನ್ಮೂಲ ಅಭಿವೃದ್ಧಿ ಉದ್ಯೋಗಿಗಳಿಂದ ಸಂಸ್ಥೆಗೆ ಶಕ್ತಿ : ಡಾ.ಪಿ.ಎಸ್.ಯಡಪಡಿತ್ತಾಯ.
ಮುನಿಯಾಲು : ಉದ್ಯಮ, ಸಂಸ್ಥೆಯಲ್ಲಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ಉದ್ಯೋಗಿಗಳು ಸಂಸ್ಥೆಯ ನೌಕರರನ್ನು ಪ್ರೇರೆಪಿಸಿ ಅವರ ಮೂಲಕ ಅತ್ಯುತ್ತಮ ಸಾಧನೆ ಮಾಡಿಸುವ ಮೂಲಕ ಸಂಸ್ಥೆಯನ್ನು ಅಭಿವೃದ್ಧಿಯತ್ತ ಕೊಂಡ್ಯೊಯುವ ಅಪಾರ ಶಕ್ತಿ ಇದೆ. ಅವರ ಕೌಶಲವನ್ನು ಉತ್ತೇಜಿಸುವ ಕೆಲಸವನ್ನು ಮಾನವ ಸಂಪನ್ಮೂಲ ವಿಭಾಗದವರು ನಡೆಸಬೇಕು. ಆ ಮೂಲಕ ತಾವು ಬೆಳೆದು ಸಂಸ್ಥೆಯನ್ನು ಬೆಳೆಸಿದಾಗ ಸಂಸ್ಥೆಯ ಜೊತೆಗೆ ಎಲ್ಲರಿಗೂ ಶಕ್ತಿ ಬರುತ್ತದೆ, ಎಲ್ಲರ ಜೀವನವೂ ಸದೃಡವಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಡಾ.ಪಿ.ಎಸ್.ಯಡಪಡಿತ್ತಾಯ ಹೇಳಿದರು.
ಅವರು ಶನಿವಾರ ಮುನಿಯಾಲಿನ ಭಾರತೀಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಸಂಜೀವಿನಿ ಫಾರ್ಮ್ ಮತ್ತು ಡೈರಿ ಗೋಧಾಮದಲ್ಲಿ ರಾಷ್ಟೀಯ ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ( ಹೆಚ್ ಆರ್ ) ಮಂಗಳೂರು ಉಡುಪಿ ವಿಭಾಗದ ವತಿಯಿಂದ ಮೂಡಬಿದರೆ ಎಸ್ ಕೆಎಫ್ ಎಲಿಕ್ಸರ್ ಉದ್ಯಮ ಸಮೂಹದ ಸಹಯೋಗದಲ್ಲಿ ನಡೆದ ಮಾನವ ಸಂಪನ್ಮೂಲ ಉದ್ಯೋಗಿಗಳ ೧ ದಿನದ ವಿಶೇಷ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಜಾಗತಿಕ ಮಟ್ಟದ ಪೈಪೋಟಿಯ ಈ ಕಾಲದಲ್ಲಿ ಸಂಸ್ಥೆಗಳಿಗೆ, ನವೋದ್ಯಮಿಗಳಿಗೆ ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಹೊಸ ಉದ್ಯೋಗಿಗಳಿಗೆ ಹೊಸ ವೃತ್ತಿ ಮತ್ತು ಸಂಸ್ಥೆಯಲ್ಲಿ ತಮ್ಮ ಕೆಲಸವನ್ನು ಅತ್ಯುತ್ತಮವಾಗಿ ಮಾಡಲು ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗವು ಪ್ರೇರಕ ಶಕ್ತಿಯಾಗಿ ಕೆಲಸ ಮಾಡುತ್ತದೆ, ಉದ್ಯೋಗಿಗಳ ಕಾರ್ಯನಿರ್ವಹಣೆಯ ಅಳೆದು ಇನ್ನಷ್ಟು ಪೂರಕ ತರಭೇತಿ ನೀಡಿ ಸಂಶೋಧನಾತ್ಮಕವಾಗಿ ರೂಪುಗೊಳಿಸಿ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಕಾರ್ಯವು ನಡೆಯುತ್ತದೆ. ಯುವ ಸಮುದಾಯವು ನವೋದ್ಯಮಿಗಳಾಗಬೇಕು, ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಮಹತ್ವದ ಕೊಡುಗೆಯನ್ನು ಕೂಡ ನೀಡಬೇಕು ಎಂದು ಉಪ ಕುಲಪತಿ ಡಾ. ಡಾ.ಪಿ.ಎಸ್.ಯಡಪಡಿತ್ತಾಯ ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮೂಡಬಿದರೆ ಎಸ್ ಕೆಎಫ್ ಎಲಿಕ್ಸರ್ ಉದ್ಯಮ ಸಮೂಹ ಮತ್ತು ಮುನಿಯಾಲು ಗೋಧಾಮದ ಆಡಳಿತ ನಿರ್ದೇಶಕ ಡಾ.ಜಿ.ರಾಮಕೃಷ್ಣ ಆಚಾರ್ ಅಂದು ಕಂಡ ಕನಸು ಇಂದು ಜಾಗತಿಕ ಮಟ್ಟದ ಉದ್ಯಮ ಉದ್ಯಮ ಸಮೂಹ ನಡೆಸುವ ಹಂತದಲ್ಲಿ ನನಸಾಗಿದೆ. ಶೂನ್ಯದಿಂದ ಆರಂಭವಾದ ಸಂಸ್ಥೆಯಿಂದ ಇಂದು ಸಾವಿರಾರು ಕೈಗಳಿಗೆ ಉದ್ಯೋಗ ನೀಡುವ ಭಾಗ್ಯ ದೊರೆತಿರುವುದು ನನ್ನ ಸೌಭಾಗ್ಯ. ಸಾಹುಕಾರ ನೌಕರನಾದಾಗ ಮಾತ್ರ ಸಂಸ್ಥೆಯನ್ನು ಯಶಸ್ವಿಯಾಗಿ ಬೆಳೆಸಿ ಮುನ್ನಡೆಸಲು ಸಾಧ್ಯವಾಗುತ್ತದೆ, ನೌಕರರನ್ನು ಮಾನವ ಸಂಪನ್ಮೂಲವಾಗಿ ಬಳಸಿಕೊಂಡು ಸಾಮಾನ್ಯನು ಕೂಡ ಅತ್ಯುನ್ನತ ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ನಾವೆಲ್ಲ ಸಾಕ್ಷಿ. ಕೃಷಿಕರೂ ಕೂಡ ಕಾರ್ಪೋರೇಟ್ ಹಂತಕ್ಕೆ ಬೆಳೆಯಬೇಕು ಎಂಬುದನ್ನು ನಾಡಿಗೆ ಸಾಕ್ಷಿಯಾಗಿ ಗೋಧಾಮ ಸೇವೆ ಮಾಡುತ್ತಿದೆ ಎಂದು ಶುಭಹಾರೈಸಿದರು.
ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕೈಗಾರಿಕೆ, ಉದ್ಯಮ ಸಮೂಹಗಳ ೫೦೦ಕ್ಕೂ ಹೆಚ್ಚು ಮಂದಿ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಉದ್ಯೋಗಿಗಳು, ಉದ್ಯಮಿಗಳು ಕಾರ್ಯಗಾರದಲ್ಲಿ ಭಾಗವಹಿಸಿದ್ದು ಸಾಧಕ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ಗೋಷ್ಠಿಗಳು ನಡೆಯಿತು.
ರಾಷ್ಟೀಯ ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ (ಹೆಚ್ಆರ್) ಮಂಗಳೂರು ಉಡುಪಿ ವಿಭಾಗದ ವತಿಯಿಂದ ಮಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಡಾ.ಪಿ.ಎಸ್.ಯಡಪಡಿತ್ತಾಯ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರಾದ ಮೂಡಬಿದರೆ ಎಸ್ ಕೆಎಫ್ ಎಲಿಕ್ಸರ್ ಉದ್ಯಮ ಸಮೂಹ ಮತ್ತು ಮುನಿಯಾಲು ಗೋಧಾಮದ ಆಡಳಿತ ನಿರ್ದೇಶಕ ಡಾ.ಜಿ.ರಾಮಕೃಷ್ಣ ಆಚಾರ್ ಅವರನ್ನು ಗೌರವಿಸಲಾಯಿತು.
ರಾಷ್ಟೀಯ ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ (ಹೆಚ್ಆರ್) ಮಂಗಳೂರು ಉಡುಪಿ ವಿಭಾಗದ ಅಧ್ಯಕ್ಷ ದೀರಜ್ ಶೆಟ್ಟಿ, ಪದಾಧಿಕಾರಿಗಳಾದ ಶೇಖರ ಪೂಜಾರಿ, ಡಾ. ದೇವರಾಜ್, ಪಿ.ಎ.ಜೋಸ್, ಪಿ.ಸುರೇಶ್, ಡಾ. ಸೆಬಾಸ್ಟೀಯನ್, ಮೂಡಬಿದರೆ ಎಸ್ ಕೆಎಫ್ ಎಲಿಕ್ಸರ್ ಉದ್ಯಮ ಸಮೂಹದ ನಿರ್ದೇಶಕ ಡಾ.ಲಕ್ಷ್ಮೀಶ ರೈ ಮುಂತಾದವರು ಉಪಸ್ಥಿತರಿದ್ದರು.
ಮಂಗಳೂರು ಸಹ್ಯಾದ್ರಿ ಸಮೂಹ ಶಿಕ್ಷಣ ಸಂಸ್ಥೆಯ ಸಹಾಯಕ ಪ್ರೋಫೆಸರ್ ಸುಷ್ಮಾ ವಿ ನಿರೂಪಿಸಿದರು.