ಬಂಟ್ಸ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ
ನಾಳೆ (ಜು.13) ಬೆಳ್ಮಣ್ ಶಾಖೆ ಉದ್ಘಾಟನೆ
ಬಂಟ್ಸ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ನಿ. ಇದರ ನೂತನ ಶಾಖೆ ಬೆಳ್ಮಣ್ ನ ಬಸ್ ನಿಲ್ದಾಣದ ಬಳಿ ಇರುವ ವನದುರ್ಗಾ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ನಾಳೆ (ಜುಲೈ 13) ಉದ್ಘಾಟನೆಗೊಳ್ಳಲಿದೆ.
ಬೆಳಗ್ಗೆ 10ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬಳಿಕ ಹೋಟೆಲ್ ಸೂರಜ್ ಇನ್ ಸಭಾ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಮುನಿಯಾಲು ಉದಯ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಕೃಷ್ಣ ವೈ. ಶೆಟ್ಟಿ ಕಾಪಿಕೆರೆ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಬೆಳ್ಮಣ್ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕೇಸ್ತರರಾದ ವೇದಮೂರ್ತಿ ವಿಜ್ಞೇಶ್ ಭಟ್ ಬ್ಯಾಂಕ್ ಉದ್ಘಾಟನೆ ನಡೆಸಲಿದ್ದಾರೆ. ಕೇಮಾರು ಮಠದ ಶ್ರೀಗಳಾದ ಈಶವಿಠಲದಾಸ ಸ್ವಾಮೀಜಿ ಹಾಗು ಬೆಲ್ಮನ್ ಚರ್ಚ್ ನ ಧರ್ಮಗುರು ರೆ. ಫಾ. ಫೆಡೆರಿಕ್ ಮಸ್ಕರೇನ್ಹಸ್ ಆಶೀರ್ವಚನಗಳನ್ನು ನೀಡಲಿದ್ದಾರೆ.